ಮಧ್ಯಪ್ರದೇಶದ ರಾಗ್ಘರ್ನ ಬಿಯೋರಾದ ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ ಅವರು ಬಿಜೆಪಿ ಸಂದೆ ಪ್ರಜ್ಞಾ ಠಾಕೂರ್ ಅವರನ್ನು ಜೀವಂತ ಸುಟ್ಟುಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಸಂಸತ್ತಿನಲ್ಲಿ ಗಾಂಧಿ ಹಂತಕ ನಾಥೂರಾಂ ಗೊಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿಯ ವಿವಾದಾತ್ಮಕ ಸಂಸದೆ ಪ್ರಗ್ಯಾ ಠಾಕೂರ್ರವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಗೋಡ್ಸೆ ಬಗ್ಗೆ ಹೇಳಿಕೆ: ಸಂಸತ್ತಿನ ರಕ್ಷಣಾ ಸಮಿತಿಯಿಂದ ಪ್ರಗ್ಯಾ ಠಾಕೂರ್ ಹೊರಕ್ಕೆ…
ಸಂಸತ್ತಿನಲ್ಲಿ ಕುಳಿತು ಪ್ರಗ್ಯಾ ಠಾಕೂರ್ ಗಾಂಧಿ ಕೊಂದವರನ್ನು ದೇಶಭಕ್ತ ಎಂದು ಹೇಳಿದ್ದಾಳೆ. ಅದನ್ನು ಖಂಡಿಸುತ್ತೇವೆ. ನಾವು ಕೇವಲ ಅವಳ ಪ್ರತಿಕೃತಿಯನ್ನು ಮಾತ್ರ ಸುಡುವುದಿಲ್ಲ. ಆಕೆ ಇಲ್ಲಿಗೇನಾದರೂ ಕಾಲಿಟ್ಟರೆ, ನಾವು ಅವಳನ್ನು ಸಹ ಸುಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
#WATCH MP: Congress MLA from Rajgarh's Biaora, Govardhan Dangi reacts on BJP MP Pragya S Thakur referring to Nathuram Godse as 'deshbhakt' in Lok Sabha, says "…We condemn this. We will not just burn her effigy, if she ever sets her foot here, we will burn her too." (28.11) pic.twitter.com/7pCVbDaquB
— ANI (@ANI) November 29, 2019
ಪ್ರಗ್ಯಾರವರ ಹೇಳಿಕೆಯಿಂದಾಗಿ ಅವರನ್ನು ಉಳಿದ ಚಳಿಗಾಲದ ಅಧಿವೇಶನಕ್ಕಾಗಿ ಪಕ್ಷದ ಸಂಸದರ ನಿಯಮಿತ ಸಭೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿದೆ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೇ ಪ್ರಜ್ಞಾ ಠಾಕೂರ್ ಅವರನ್ನು ಇತ್ತೀಚೆಗೆ ಸೇರಿಸಿಕೊಂಡಿದ್ದ ರಕ್ಷಣಾ ಸಂಸದೀಯ ಸಮಿತಿಯಿಂದಲೂ ಸಹ ಹೊರಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆ ಮೂಲಕ ಅತಿರೇಕದ ಮತ್ತು ಪ್ರಚೋದನಾಕಾರಿಯಾಗಿ ಹೇಳುತ್ತಿದ್ದ ಬಿಜೆಪಿ ಶಾಸಕರ ಮತ್ತು ಸಂಸದರ ಪಾಲಿಗೆ ಕಾಂಗ್ರೆಸ್ ಶಾಸಕನೂ ಸೇರಿಕೊಂಡಿದ್ದಾರೆ.