Homeಮುಖಪುಟ370ನೇ ವಿಧಿ ರದ್ದು: ಕರಾಳ ದಿನವೆಂದ ಮೆಹಬೂಬ ಮುಫ್ತಿ, ಸ್ವಾಗತಿಸಿದ ಧೃವ್ ರಾಠೀ...

370ನೇ ವಿಧಿ ರದ್ದು: ಕರಾಳ ದಿನವೆಂದ ಮೆಹಬೂಬ ಮುಫ್ತಿ, ಸ್ವಾಗತಿಸಿದ ಧೃವ್ ರಾಠೀ…

- Advertisement -
- Advertisement -

370ನೇ ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಬಿ.ಎಸ್.ಪಿ, ವೈ.ಎಸ್.ಆರ್.ಪಿ, ಬಿ.ಜೆ.ಡಿ, ಟಿ.ಆರ್.ಎಸ್, ಆಮ್ ಆದ್ಮಿ ಪಕ್ಷ, ಶಿವಸೇನಾ ಪಕ್ಷಗಳು ಸ್ವಾಗತಿಸಿವೆ. ಜೆಡಿಯೂ ಸದನದಿಂದ ಹೊರನಡಿದಿದೆ.

‘ಭಾರತದ ಪ್ರಜಾತಂತ್ರದ ಕರಾಳ ದಿನ ಮತ್ತು ದೊಡ್ಡ ದುರಂತ’ ಎಂದು 370 ನೇ ವಿಧಿ ರದ್ದುಗೊಳಿಸುವ ಪ್ರಸ್ತಾಪದ ಕುರಿತು ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ ಮತ್ತು ನಾಗರಿಕ ಸಮಾಜದ ಕೆಲವು ವಿಭಾಗಗಳು ಈ ಬೆಳವಣಿಗೆಗಳನ್ನು ಸಂತೋಷದಿಂದ ಆಚರಿಸುತ್ತಿರುವ ರೀತಿ ಅಸಹ್ಯಕರ ಮತ್ತು ಅನಾನುಕೂಲವಾಗಿದೆ. ಕೇಂದ್ರ ಸರ್ಕಾರದ ಉದ್ದೇಶ ಸ್ಪಷ್ಟ ಮತ್ತು ಕೆಟ್ಟದಾಗಿದೆ. ಅವರು ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಬಯಸುತ್ತಾರೆ, ಮುಸ್ಲಿಮರನ್ನು ತಮ್ಮ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗುವ ಮಟ್ಟಿಗೆ ನಿರಾಕರಿಸುತ್ತಾರೆ ಎಂದಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಪ್ರಖ್ಯಾತ ಯೂಟ್ಯೂಬರ್ ಧೃವ್ ರಾಠೀ ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ದಾರೆ. ಅವರು

“ಇಂದು ಐತಿಹಾಸಿಕ ದಿನ!
ಆರ್ಟಿಕಲ್ 370 ಮತ್ತು 35 ಎ ಅನ್ನು ತೆಗೆದುಹಾಕಲಾಗುತ್ತದೆ
ಜಮ್ಮು ಕಾಶ್ಮೀರ ಈಗ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಲಡಾಕ್ ಶಾಸಕಾಂಗವಿಲ್ಲದೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಲಿದೆ
ಜಮ್ಮು ಕಾಶ್ಮೀರ ಭಾರತೀಯ ಸಂವಿಧಾನದ ಅಡಿಯಲ್ಲಿ ಬರುತ್ತದೆ.
ಬಿಜೆಪಿಯ ದೀರ್ಘಕಾಲದ ಭರವಸೆ ಅಂತಿಮವಾಗಿ ಈಡೇರಿದೆ. ತಾತ್ತ್ವಿಕವಾಗಿ, ಇದು ಹೆಚ್ಚಿನ ವ್ಯಾಪಾರ ಮತ್ತು ಉದ್ಯೋಗವನ್ನು ಪಡೆಯುವ ಮೂಲಕ ಕಾಶ್ಮೀರವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಅಂತಿಮವಾಗಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಪ್ರಗತಿಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದು ಇದರಿಂದ ಅಲ್ಲಿ ಅಭಿವೃದ್ದಿ ಮತ್ತು ಶಾಂತಿ ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿಯೂ ಪರ ವಿರೋಧದ ಚರ್ಚೆಗಳು ತಾರಕಕ್ಕೇರಿವೆ.

ಜನಮತಗಣನೆ ಇಲ್ಲದೆ ಒಂದು‌ ಪ್ರಾಂತ್ಯದ ಸ್ವಾಯತ್ತ ಅಧಿಕಾರವನ್ನು ಅನೂರ್ಜಿತಗೊಳಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಎಂತಹುದೇ ಕಾರಣವಿದ್ದರೂ ‘ಜನರಿಂದ ಸರ್ಕಾರ‌, ಜನರಿಂದಲೇ ದೇಶ’ ಎಂಬುದನ್ನು ಮರೆಯಬಾರದು. #370 ರದ್ದು ಮಾಡುವ ಮೊದಲು ಅಲ್ಲಿನ ಜನಮತಗಣನೆಯಾಗಬೇಕು. ಅದನ್ನು ಪ್ರಜಾಸತ್ತಾತ್ಮಕ ಮಾದರಿಯಲ್ಲಿಯೇ ರದ್ದುಗೊಳಿಸಬೇಕೇ ವಿನಃ ದೇಶವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದಾಗ ಏಕಾಏಕಿ ಪ್ರಾಂತ್ಯದಲ್ಲಿ ಸೇನೆಯನ್ನು ಜಮಾವಣೆ ಮಾಡಿ #144 ನಿಷೇಧಾಜ್ಞೆ ಜಾರಿಗೆ ತಂದು, ನಾಗರೀಕರನ್ನು – ಜನನಾಯಕರನ್ನು ಗೃಹಬಂಧನದಲ್ಲಿಟ್ಟು , ದೆಹಲಿಯ ಒಕ್ಕೂಟ ಸರ್ಕಾರವು ತನ್ನಷ್ಟಕ್ಕೆ ತಾನೇ ನಿರ್ಧಾರ ತೆಗೆದುಕೊಳ್ಳುವುದು ಸರಕಾರಿ ದೌರ್ಜನ್ಯವಲ್ಲದೇ ಮತ್ತೇನೂ ಅಲ್ಲ. ಈ ದೇಶವನ್ನು ಅರಾಜಕತೆಗೆ ಒಡ್ಡುವಲ್ಲಿ ನಿರ್ಣಾಯಕವಾದ ನಡಾವಳಿ ಇದಾಗಲಿದೆ. ಇನ್ನು ಮುಂದೆ ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ದ್ರಾವಿಡ ರಾಜ್ಯಗಳು ಅತ್ಯಂತ ಬಲವಾದ ‘ಫೆಡರಲಿಜಂ’ ಅನ್ನು ಜಾರಿಗೊಳಿಸಲು ಕಾರ್ಯಪ್ರವೃತ್ತರಾಗಬೇಕು. ಅದಾಗದೇ ಇದ್ದಲ್ಲಿ ನಮ್ಮ ಊರುಗಳಿಗೂ ಸೇನಾಪಡೆ ತಂದು ನಮ್ಮ ಎದೆಗೂ ಗುಂಡಿಕ್ಕುವ ಧೈರ್ಯವನ್ನು ದೆಹಲಿಯ ಒಕ್ಕೂಟ ಸರ್ಕಾರ ಮಾಡುವುದರಲ್ಲಿ ಅನುಮಾನವಿಲ್ಲ.

ಈ ದೇಶದಲ್ಲಿ ಇರುವುದು ಒಕ್ಕೂಟ ಸರ್ಕಾರವೇ ಹೊರತು ಸರ್ವಾಧಿಕಾರದ ಸರ್ಕಾರವಲ್ಲ! ಇದನ್ನು ದೆಹಲಿಯ ಭಂಡ ನಾಯಕರಿಗೆ ದಕ್ಷಿಣ ಮತ್ತು ಈಶಾನ್ಯರಾಜ್ಯ ಜನರು ಸರಿಯಾಗಿ ಮನಗಾಣಿಸದೇ ಹೋದಲ್ಲಿ ಅತ್ಯಂತ ಹೇಯವಾದ ಸ್ಥಿತಿಯನ್ನು ಈ ನೆಲವು ಅನುಭವಿಸುದರಲ್ಲಿ ಅನುಮಾನವಿಲ್ಲ. ಎಂದು ಯುವಸಾಹಿತಿ ರಾಜೇಂದ್ರ ಪ್ರಸಾದ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

“ಯಾವಾಗೆಲ್ಲ ದೇಶದ ಆರ್ಥಿಕತೆ ಹಳ್ಳ ಹಿಡಿಯುತ್ತೆ ಆಗ ದೇಶ ಆಳುವವರು ಜನರನ್ನು ಯುದ್ಧದ ನಶೆಗೆ ತಳ್ಳುತ್ತಾರೆ. ಜನ ಕೂಡ ಯುದ್ಧದ ಹುಚ್ಚಿನಿಂದ ನಿಜವಾದ ಸಮಸ್ಯೆಯನ್ನೆ ಮರೆತು ದೇಶ ಆಳುವವರ ಬೆಂಬಲಕ್ಕೆ ನಿಲ್ಲುತ್ತಾರೆ.

ನಾವುಗಳು ಇನ್ನು ನೂರು ಶತಮಾನ ಕಳೆದರೂ ಇತಿಹಾಸದಿಂದ ಪಾಠ ಕಲಿಯಲ್ಲ ಕಣ್ರಪ್ಪ.” ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯ ಪ್ರತಿಕ್ರಿಯಿಸಿದ್ದಾರೆ. “ಇನ್ನು ದೇಶದ ಆರ್ಥಿಕ ಹಿಂಜರಿತ ಚರ್ಚೆಗೆ ಶ್ರದ್ಧಾಂಜಲಿಗಳು ?” ಎಂದು ಸರೋವರ್ ಬೆಂಕೀಕೆರೆ ತಿಳಿಸಿದ್ದಾರೆ.

“ನಾವು ಲಡಾಕ್ ನ ಝಂಸ್ಕಾರ್ ನಲ್ಲಿದ್ದಾಗ ರಿಲಯನ್ಸ್ ಪವರ್ ನ ಕೆಲವು ಸಿಬ್ಬಂದಿ ಸೋಲಾರ್ ಪವರ್ ಪ್ಲಾಂಟ್ ಗಾಗಿ ಸರ್ವೇ ಮಾಡಲು ಬಂದಿದ್ದರು. ಇಷ್ಟು ಬೇಗ ಪ್ರಾಜೆಕ್ಟ್ ಪ್ರೊಪೊಸಲ್ ಮುಗಿದು ಸರಕಾರದ ವತಿಯಿಂದ ಕೆಲಸ ಶುರುವಾಗುತ್ತದೆ ಅಂತ ಗೊತ್ತಿರಲಿಲ್ಲ.” ಎಂದು ಶ್ರೀಹರ್ಷ ಶಾಲಿಮಠ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...