Homeರಂಜನೆಕ್ರೀಡೆಸೂಪರ್ ಓವರ್ ವಿರುದ್ದ ತಿರುಗಿಬಿದ್ದ ಗಂಭೀರ್, ರೋಹಿತ್ ಮತ್ತು ಯುವರಾಜ್: ಏನಿದು ಸೂಪರ್ ಓವರ್?

ಸೂಪರ್ ಓವರ್ ವಿರುದ್ದ ತಿರುಗಿಬಿದ್ದ ಗಂಭೀರ್, ರೋಹಿತ್ ಮತ್ತು ಯುವರಾಜ್: ಏನಿದು ಸೂಪರ್ ಓವರ್?

- Advertisement -
- Advertisement -

ನಿನ್ನೆ ನಡೆದ 2019ರ ಐಸಿಸಿ ವಿಶ್ವಕಪ್ ಕ್ರಿಕೆಟ್‍ನ ಫೈನಲ್ ಪಂದ್ಯದಲ್ಲಿ ಸೂಪರ್ ಒವರ್‍ನಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಜಯಿಸಿ ಚಾಂಪಿಯನ್ ಆಯಿತು. ಈ ಸೂಪರ್ ಓವರ್ ವಿರುದ್ಧ ಈಗ ಭಾರತದ ಆಟಗಾರರಾದ ಗೌತಮ್ ಗಂಭೀರ್, ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಕಿಡಿಕಾರಿದ್ದು ಇದನ್ನು ಐಸಿಸಿ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 241 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಇಂಗ್ಲೆಂಡ್ ಕೂಡ 241 ರನ್ ಗೆ ಆಲೌಟ್ ಆಯ್ತು. ಆಗ ಪಂದ್ಯ ಟೈ ಆದ ಕಾರಣ ಸೂಪರ್ ಒವರ್ ಆಡಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 6 ಬಾಲ್‍ಗಳಲ್ಲಿ 15 ರನ್ ಗಳಿಸಿದರೆ ಆನಂತರ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಕೂಡ 6 ಬಾಲ್‍ಗಳಲ್ಲಿ 15 ರನ್ ಗಳಿಸಿತು. ಆದರೂ ಸೂಪರ್ ಓವರ್ ನಿಯಮದ ಪ್ರಕಾರ ಇಂಗ್ಲೆಂಡ್ ಗೆದ್ದು ಬೀಗಿತು.

ಇದರ ಕುರಿತು ಅಪಸ್ವರಗಳು ಜೋರಾಗಿಯೇ ಕೇಳಿಬಂದಿವೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ “ಹೆಚ್ಚು ಬೌಂಡರಿ ಗಳಿಸಿದ್ದವರು ಗೆದ್ದರು ಎಂಬ ಐಸಿಸಿಯ ಹಾಸ್ಯಸ್ಪದ ನಿಯಮದಿಂದ 2019ರ ವಿಶ್ವಕಪ್ ಫೈನಲ್ ಹೀಗಾಗಿದೆ. ನನ್ನ ಪ್ರಕಾರ ಇಬ್ಬರು ಗೆದ್ದಿದ್ದು, ಇಬ್ಬರನ್ನು ವಿಜಯಿ ಎಂದು ಘೋಷಿಸಬೇಕು. ಉಗುರು ಕಚ್ಚುವಂಟೆ ರೋಮಾಂಚನ ಆಟವಾಡಿದ ಎರಡು ತಂಡಗಳನ್ನು ನಾನು ಅಭಿನಂದಿಸುತ್ತೇನೆ. ಇಬ್ಬರೂ ಗೆದ್ದಿದ್ದಾರೆ ಎಂದಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ರೋಹಿತ್ ಶರ್ಮಾ “ಕ್ರಿಕೆಟ್‍ನ ಕೆಲ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಇನ್ನು ಯುವರಾಜ್ ಸಿಂಗ್ “ಈ ನಿಯಮವನ್ನು ನಾನು ಖಂಡಿತ ಒಪ್ಪುವುದಿಲ್ಲ. ಆದರೆ ನಿಯಮ ಅಂದರೆ ನಿಯಮವೆ. ಹಾಗಾಗಿ ಕೊನೆಯದಾಗಿ ನಾನು ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡವನ್ನು ಅಭಿನಂದಿಸುತ್ತೇನೆ. ಆದರೆ ನನ್ನ ಹೃದಯ ಮಾತ್ರ ಕೊನೆಯವರೆಗೂ ದಿಟ್ಟವಾಗಿ ಹೋರಾಡಿದ ನ್ಯೂಜಿಲೆಂಡ್ ಪರವಾಗಿಯೇ ತುಡಿಯುತ್ತಿದೆ. ಗ್ರೇಟ್ ಗೇಮ್, ಎಪಿಕ್ ಫೈನಲ್” ಎಂದು ಟ್ವೀಟಿಸಿದ್ದಾರೆ.

ಸೂಪರ್ ಓವರ್ ನ ನಿಯಮಗಳೇನು?

ಯಾವುದೇ ಪಂದ್ಯದಲ್ಲಿ ಎರಡು ತಂಡಗಳ ರನ್ ಸಮನಾದರೆ ಅಂದರೆ ಟೈ ಆದರೆ ಅವರು ಎಷ್ಟೇ ವಿಕೆಟ್ ಕಳೆದುಕೊಂಡಿದ್ದರೂ ಸಹ ಅದನ್ನು ಪರಿಗಣಿಸದೇ, ಆಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಅನ್ನು ಪರಿಚಯಿಸಲಾಯಿತು.

ಎರಡು ತಂಡಗಳಿಗೆ ಆಡಲು ಒಂದು ಓವರ್ (6 ಬಾಲ್) ಸಿಗುತ್ತದೆ. ಬಾಲ್ ಮಾಡಲು ಒಬ್ಬ ಬೌಲರ್‍ಗೆ ಅವಕಾಶವಿರುತ್ತದೆ.
ತಂಡದ ಹನ್ನೊಂದು ಜನರಲ್ಲಿ ಯಾರಾದರೂ ಮೂವರು ಬ್ಯಾಟ್ಸ್‍ಮನ್‍ಗಳಿಗೆ ಅವಕಾಶವಿರುತ್ತದೆ. 6 ಬಾಲ್‍ಗಳಿಗಿಂತ ಮೊದಲೇ ಇಬ್ಬರು ಬ್ಯಾಟ್ಸ್‍ಮನ್‍ಗಳು ಔಟಾದರೆ ಆ ತಂಡದ ಇನ್ನಿಂಗ್ಸ್ ಅಲ್ಲಿಗೆ ಮುಕ್ತಾಯವಾಗುತ್ತದೆ.

ಪಂದ್ಯದ ಕೊನೆಯ ಓವರ್‍ನಲ್ಲಿ ಯಾವ ಫೀಲ್ಡಿಂಗ್ ನಿರ್ಬಂಧವಿರುತ್ತದೆಯೇ ಸೂಪರ್ ಓವರ್‍ಗೂ ಅದೇ ಅನ್ವಯವಾಗುತ್ತದೆ.

ಪ್ರತಿ ಪಂದ್ಯದಂತೆ ಒಂದು ಡಿಆರ್‍ಎಸ್ ರಿವ್ಯೂ ತೆಗೆದುಕೊಳ್ಳಲು ಅವಕಾಶವಿರುತ್ತದೆ. ರಿವ್ಯೂ ಯಶಸ್ವಿಯಾಗದರೆ ಮುಂದುವರೆಯುತ್ತದೆ ಮತ್ತು ವಿಫಲವಾದರೆ ಮುಕ್ತಾಯವಾಗುತ್ತದೆ.

ಪಂದ್ಯದಲ್ಲಿ ಎರಡನೇಯದಾಗಿ ಬ್ಯಾಟಿಂಗ್ ಮಾಡಿದ ತಂಡ ಮೊದಲು ಬ್ಯಾಟ್ ಮಾಡುತ್ತದೆ. ಉಳಿದ ನಂತರ ಚೇಸಿಂಗ್ ಮಾಡಬೇಕು. ಯಾವ ತಂಡ ಹೆಚ್ಚು ರನ್ ಗಳಿಸಿರುತ್ತದೆಯೇ ಆ ತಂಡವನ್ನು ವಿಜಯೀ ಎಂದು ಪರಿಗಣಿಸಲಾಗುತ್ತದೆ.

ಒಂದು ವೇಳೆ ಸೂಪರ್ ಓವರ್‍ನಲ್ಲಿಯೂ ಎರಡೂ ತಂಡಗಳು ಸಮಾನ ರನ್ ಗಳಿಸಿದರೆ (ಟೈ ಆದರೆ) ಆಗ ಪಂದ್ಯದಲ್ಲಿ ಯಾವ ತಂಡ ಹೆಚ್ಚು ಬೌಂಡರಿಗಳನ್ನು ಗಳಿಸುತ್ತದೆಯೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಮೊನ್ನೆಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ಹೀಗೆಯೇ ಆಯಿತು. ಸೂಪರ್ ಓವರ್‍ನಲ್ಲಿ ಇಂಗ್ಲೆಂಡ್ 15 ರನ್ ಗಳಿಸಿದರೆ, ನ್ಯೂಜಿಲೆಂಡ್ ಕೂಡ ಅಷ್ಟೇ ರನ್ ಗಳಿಸಿತು. ಆದರೆ ಬೌಂಡರಿಗಳ ಲೆಕ್ಕ ತೆಗೆದುಕೊಂಡರೆ ಇಂಗ್ಲೆಂಡ್ ಒಟ್ಟು 26(ಮುಖ್ಯ ಪಂದ್ಯದಲ್ಲಿ 24, ಸೂಪರ್ ಓವರ್‍ನಲ್ಲಿ 2) ಬೌಂಡರಿಗಳನ್ನು ಬಾರಿಸಿದರೆ ನ್ಯೂಜಿಲೆಂಡ್ 17 (ಮುಖ್ಯ ಪಂದ್ಯದಲ್ಲಿ 16, ಸೂಪರ್ ಓವರ್‍ನಲ್ಲಿ 1) ಮಾತ್ರ ಗಳಿಸಿತ್ತು. ಹಾಗಾಗಿ ಇಂಗ್ಲೆಂಡ್ ವಿಜಯಿಯಾಯಿತು.

ಒಂದು ವೇಳೆ ಆಗಲೂ ಎರಡು ತಂಡಗಳು ಸಮಾನ ಬೌಂಡರಿಗಳನ್ನು ಗಳಿಸಿದರೆ ಸೂಪರ್ ಓವರ್ ಅನ್ನು ಹೊರತುಪಡಿಸಿ ಮುಖ್ಯ ಪಂದ್ಯದಲ್ಲಿ ಯಾರು ಹೆಚ್ಚು ಬೌಂಡರಿಗಳನ್ನು ಗಳಿಸಿರುತ್ತಾರೋ (ಸೂಪರ್ ಓವರ್ ಹೊರತುಪಡಿಸಿ) ಅದನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...