ನಿನ್ನೆ ಬೆಳಿಗ್ಗೆ ಅಮಾನುಷವಾಗಿ ಬೆಂಕಿಗೆ ಆಹುತಿಯಾಗಿ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉನ್ನಾವೋ ಸಂತ್ರಸ್ತೆ ಬದುಕುವುದು ಕಷ್ಟವೆಂದು ವೈದ್ಯರು ತಿಳಿಸಿದ್ದಾರೆ.
ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಆರೋಪಿಗಳು: ಯುಪಿಯಲ್ಲಿ ಮತ್ತೊಂದು ಅಮಾನವೀಯ ಘಟನೆ
ಅತ್ಯಾಚಾರ ಪ್ರಕರಣದ ಕುರಿತು ದೂರು ನೀಡಿದ್ದ ಯುವತಿಯೊಬ್ಬಳು ನ್ಯಾಯಾಲಯದ ವಿಚಾರಣೆಗಾಗಿ ತೆರಳುವಾಗಿ ಆರೋಪಿಗಳು ಆಕೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದರು.
ದಾಳಿಯಲ್ಲಿ ಶೇ 90 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದ ಯುವತಿಯನ್ನು ಗುರುವಾರ ಲಖನೌದಿಂದ ದೆಹಲಿಗೆ ಕರೆದೊಯ್ಯಲಾಯಿತು.
“ಬಲಿಪಶು ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆ. ಬದುಕುಳಿಯುವ ಕನಿಷ್ಠ ಅವಕಾಶಗಳಿವೆ. ಈಗ, ನಾವು ಅವಳನ್ನು ವೆಂಟಿಲೇಟರ್ನಲ್ಲಿ ಇರಿಸಿದ್ದೇವೆ ”ಎಂದು ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುನಿಲ್ ಗುಪ್ತಾ ಹೇಳಿದ್ದಾರೆ.