ಹಣ ಅಧಿಕಾರಕ್ಕಾ ಮಾನ ಮರ್ಯಾದೆ ಬಿಟ್ಟು ರಾಜೀನಾಮೆ ಕೊಟ್ಟು ಅನರ್ಹರಾಗಿರುವ 15 ಜನ ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂದು ಪ್ರಚಾರಾಂದೋಲನ ಟ್ವಿಟ್ಟರ್ನಲ್ಲಿ ಜೋರಾಗಿ ನಡೆಯುತ್ತಿದ್ದು ಟ್ರೆಂಡಿಂಗ್ ಆಗಿದೆ.
ಹಲವು ಸಾಮಾಜಿಕ ಕಾರ್ಯಕರ್ತರು ಕರೆಕೊಟಿದ್ದ ಅನರ್ಹ ಶಾಸಕರನ್ನು ತಿರಸ್ಕರಿಸಿ #RejectDisqualifiedMLAs ಎಂಬ ಟ್ವಿಟ್ಟರ್ ಅಭಿಯಾನಕ್ಕೆ ಭಾರೀ ಸ್ಪಂದೆನ ಸಿಕ್ಕಿದೆ. ಕೆಲವೇ ಕ್ಷಣಗಳಲ್ಲಿ ಸಾವಿರಾರು ಟ್ವೀಟ್ಗಳು ದಾಖಲಾಗಿ ಅನರ್ಹ ಶಾಸಕರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಸ್ಯಾಂಪಲ್ಗಳು ಇಲ್ಲಿವೆ.
ಮುಂದೆಂದೂ ಶಾಸಕರು ತಮ್ಮನ್ನು ತಾವು ಮಾರಿಕೊಳ್ಳಬಾರದು
ಅನರ್ಹತೆ ಎಂಬ ಕಳಂಕ ಕರ್ನಾಟಕದಲ್ಲಿ ಸುಳಿಯಬಾರದು
ಜನತೆಗೆ ನಂಬಿಕೆದ್ರೋಹ ಮಾಡುವವರು ತಲೆ ಎತ್ತಬಾರದು
ಪ್ರಜಾತಂತ್ರ & ಸಂವಿಧಾನ ಗೌರವಿಸಲ್ಪಡಬೇಕು… ಎಂಬ ಟ್ವೀಟ್ ವೈರಲ್ ಆಗಿದೆ.
ಒಂದು ಗಂಟೆಗೆ ಮೂರು ಸಾವಿರದಷ್ಟು ಟ್ವೀಟ್ಗಳು ದಾಖಲಾಗಿದ್ದು ಬೆಂಗಳೂರು ಟ್ರೆಂಡ್ನಲ್ಲಿದೆ ಮೊದಲ ಸ್ಥಾನದಲ್ಲಿದ್ದು ಭಾರತದಲ್ಲಿ ಎಂಟನೇ ಸ್ಥಾನದಲ್ಲಿದೆ.
ಕ್ಷೇತ್ರದ ಅಭಿವೃದ್ದಿಗೆ ಶಾಸಕರಾದರೆ ಸಾಕು. ಮತ್ತೆ ಇವರೆಲ್ಲಾ ಮಂತ್ರಿಯಾಗಬೇಕೆಂದು ಹಠ ಹಿಡಿದಿದ್ದು ಏಕೆ? ತಮ್ಮ ಅಭಿವೃದ್ಧಿಗಾಗಿ ಅಲ್ಲವೇ? ಅವರನ್ನು ಸೋಲಿಸಿ ಸರಿಯಾದ ಪಾಠ ಕಲಿಸಿ.#RejectDisqualifiedMLAs#ಅನರ್ಹ_ಶಾಸಕರನ್ನು_ತಿರಸ್ಕರಿಸಿ
— Jayraj Nanjappa (@JayrajNanjappa) December 3, 2019
I am sure people of Karnataka will not tolerate horse trading for sure they will #RejectDisqualifiedMLAs
— B Harish Kumar/ಬಿ ಹರೀಶ್ ಕುಮಾರ್ (@BHarishKumarKrp) December 3, 2019
ಇನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸಹ ಅದೇ ಹ್ಯಾಸ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ 17 ಶಾಸಕರನ್ನು 'ಅನರ್ಹರು' ಎಂದು ಪರಿಗಣಿಸಿದ್ದು, ಇಂಥವರನ್ನು ಯಾರೂ ಬೆಂಬಲಿಸಬಾರದು. ಇದನ್ನು ಮತದಾರರು ಸರಿಯಾಗಿ ಅರ್ಥ ಮಾಡಿಕೊಂಡು ಎಲ್ಲಾ ಅನರ್ಹರನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕಾಗಿದೆ.#DefeatTheDisqualified#RejectDisqualifiedMLAs
— H D Kumaraswamy (@hd_kumaraswamy) December 3, 2019
ಪಕ್ಷಾಂತರಿಗಳ ವಿರುದ್ಧ ಇಡೀ ದೇಶದ ಜನ ಸಿಡಿದೆದ್ದಿದ್ದಾರೆ.
ಈ ಪ್ರತಿರೋಧದ ಪ್ರತಿಧ್ವನಿ ಕರ್ನಾಟಕದಲ್ಲಿಯೂ ಮೊಳಗುತ್ತಿದೆ.
ನಮ್ಮ ನೆಲದ ಸಾಕ್ಷಿ ಪ್ರಜ್ಞೆಗಳಂತಿರುವ ಹಿರಿಯರು ಅನರ್ಹ ಶಾಸಕರನ್ನು ಸೋಲಿಸಲು ನೀಡಿದ ಕರೆಗೆ ನಾವೆಲ್ಲ ಓಗೋಡೋಣ.#RejectDisqualifiedMLAs #ಅನರ್ಹ_ಶಾಸಕರನ್ನು_ತಿರಸ್ಕರಿಸಿ pic.twitter.com/C1Cxb5IAol
— Siddaramaiah (@siddaramaiah) December 3, 2019
ಈ ಕುರಿತು ಹಲವಾರು ಮೀಮ್ಗಳು, ಟ್ರೋಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.