17 ಶಾಸಕರನ್ನು ಅನರ್ಹಗೊಳಿಸಿದ್ದ ಮಾಜಿ ರಮೇಶ್ ಕುಮಾರ್ ರವರ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಜೊತೆಗೆ ಅನರ್ಹರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಹ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಡೆಗಳ ಕುರಿತು ಚರ್ಚಿಸಲು ಅನರ್ಹ ಶಾಸಕರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ.
ತೀರ್ಪು ಪ್ರಕಟವಾಗುತ್ತಲೇ ಹರ್ಷ ವ್ಯಕ್ತಪಡಿಸಿರುವ ಬಿಎಸ್ವೈ ನಗುಮುಖದಲ್ಲೇ ಮುಂದಿನ ನಡೆಯತ್ತ ಗಮನಹರಿಸಿದ್ದಾರೆ. ಕೂಡಲೇ ಎಲ್ಲಾ ಅನರ್ಹ ಶಾಸಕರಿಗೂ ಸಭೆಗೆ ಬುಲಾವ್ ನೀಡಿದ್ದಾರೆ.
ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಗೆಲ್ಲುವವರೆಗೂ ಮಂತ್ರಿಯಾಗುವಂತಿಲ್ಲ ಮತ್ತು ಯಾವುದೇ ಸರ್ಕಾರಿ ಹುದ್ದೆ ಹೊಂದುವಂತಿಲ್ಲ ಎಂದು ಸುಪ್ರೀಂ ಹೇಳಿದೆ. ಇದರ ಕುರಿತು ಮತ್ತು ಟಿಕೆಟ್ ಹಂಚಿಕೆಯ ಕುರಿತು ಮಹತ್ವದ ಚರ್ಚೆಗಳು ಯಡಿಯೂರಪ್ಪನವರ ಸಭೆಯಲ್ಲಿ ನಡೆಯುತ್ತವೆ ಎನ್ನಲಾಗಿದೆ.
ಇನ್ನು ಡಾ.ಸುಧಾಕರ್, ಗೋಪಾಲಯ್ಯ, ಎಚ್ ವಿಶ್ವನಾಥ್, ಪ್ರತಾಪ್ಗೌಡ ಪಾಟೀಲ್ ಮುಂತಾದ ಅನರ್ಹ ಶಾಸಕರು ಭಾರೀ ಖುಷಿಯಲ್ಲಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.