Homeಚಳವಳಿನಾವು ಮನುಷ್ಯರು- ಸಾಗುವಳಿ ಮಾಡಲು ಭೂಮಿ ಕೊಡಿ, ವಾಸ ಮಾಡಲು ಮನೆ ಕೊಡಿ...

ನಾವು ಮನುಷ್ಯರು- ಸಾಗುವಳಿ ಮಾಡಲು ಭೂಮಿ ಕೊಡಿ, ವಾಸ ಮಾಡಲು ಮನೆ ಕೊಡಿ…

- Advertisement -
- Advertisement -

ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಎರಡನೇ ದಿನವೂ ಮುಂದುವರೆದಿದೆ. ಧರಣಿನಿರತರದ್ದು ಒಂದೇ ಪಟ್ಟು ಸಾಗುವಳಿ ಮಾಡಲು ಭೂಮಿ ಕೊಡಿ, ವಾಸ ಮಾಡಲು ಮನೆ ಕೊಡಿ. ನಮಗೆ ಭೂಮಿ ಇಲ್ಲ ಮನೆ ಇಲ್ಲ ಎಂದು ಪಟ್ಟುಹಿಡಿದ್ದಾರೆ.

ಇದರ ನಡುವೆಯೇ ನವೆಂಬರ್ 29ರಂದು ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಧರಣಿ ಕೈಬಿಡುವಂತೆ ಜಿಲ್ಲಾಧಿಕಾರಿ ಮಾಡಿದ ಮನವಿ ತಿರಸ್ಕರಿಸಿದರು. ಪ್ರಧಾನ ಕಾರ್ಯದರ್ಶಿಗಳು ಸ್ಥಳಕ್ಕೆ ಬಂದು ಲಿಖಿತ ಪತ್ರದ ಮೂಲಕ ಭರವಸೆ ನೀಡಿದರೆ ಮಾತ್ರ ಧರಣಿ ವಾಪಸ್ ಪಡೆಯುತ್ತೇವೆ ಎಂದು ಖಚಿತವಾಗಿ ಹೇಳಿದರು.

ಜಿಲ್ಲೆಯಲ್ಲಿ ಬಡವರು ಸಾಗುವಳಿ ಮಾಡುತ್ತಿರುವ ಭೂಮಿಯ ಕುರಿತು ಸಾಕಷ್ಟು ಗೊಂದಲಗಳು ಇವೆ. ಎರಡು ಎಕರೆಯಲ್ಲಿ ಉಳಿಮೆ ಮಾಡುತ್ತಿದ್ದರೆ, ಪಹಣಿಯಲ್ಲಿ ಮೂರು ಎಕರೆ ಎಂದು ನಮೂದಾಗಿದೆ. ಇದು ನಿಮ್ಮ ತಪ್ಪಲ್ಲ. ಕಂದಾಯ ಅಧಿಕಾರಿಗಳು ಮಾಡಿರುವ ತಪ್ಪು. ಇದನ್ನು ಸರಿಪಡಿಸಲು ಕಾಲಾವಕಾಶ ಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ; ಓಟು ಕೊಡುವ ಜನರಿಗೆ ತುಂಡು ಭೂಮಿಯಿಲ್ಲ ಏಕೆ? ಎಚ್‌.ಎಸ್‌ ದೊರೆಸ್ವಾಮಿ ಪ್ರಶ್ನೆ…

ನೀವು ಮನವಿಗಳನ್ನು ಕೊಟ್ಟಿದ್ದೀರಿ. ಅವುಗಳನ್ನು ಪರಿಶೀಲಿಸಲು ಸಮಯಾವಕಾಶ ಬೇಕು. ಹಂತಹಂತವಾಗಿ ಪರಿಶೀಲಿಸುತ್ತೇವೆ. ನೀವು ಕೊಟ್ಟಿರುವ ಅರ್ಜಿಗಳನ್ನು ಪರಿಶೀಲಿಸಲು ವಿಭಾಗಾಧಿಕಾರಿಗಳು ಪ್ರತಿ ತಿಂಗಳ ನಮ್ಮ ಇಬ್ಬರು ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸುವಂತೆ ನಿರ್ದೇಶನ ನೀಡುತ್ತೇವೆ. ನಮಗೂ ಸಾಕಷ್ಟು ಕೆಲಸಗಳಿವೆ. ಪ್ರಧಾನ ಕಾರ್ಯದರ್ಶಿಗಳು ಬ್ಯುಸಿಯಾಗಿದ್ದಾರೆ. ಭೇಟಿ ಮಾಡಲು ಸಿಗುತ್ತಿಲ್ಲ. ಅವರೊಂದಿಗೆ ಮಾತುಕತೆ ನಡೆಸಬೇಕು. ಕಾಲವಕಾಶ ಕೊಡಿ, ಧರಣಿ ಸತ್ಯಾಗ್ರಹ ಕೈಬಿಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಮಧ್ಯಪ್ರವೇಶಿಸಿ ಹೋರಾಟಗಾರ ನಾಗಭೂಷಣ್, ಮೂರು ವರ್ಷಗಳಿಂದಲು ಭೂಮಿ ಮತ್ತು ವಸತಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಹಲವು ಮನವಿಗಳನ್ನು ನೀಡಿದ್ದೇವೆ. ಕೇವಲ ಭರವಸೆ ಮಾತ್ರ ಸಿಕ್ಕಿದೆ. ಏನೂ ಕೆಲಸ ಆಗಿಲ್ಲ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಮೇಲೆ ನಮಗೆ ನಂಬಿಕೆ ಹೊರಟು ಹೋಗಿದ. ಹಾಗಾಗಿ ಪ್ರಧಾನ ಕಾರ್ಯದರ್ಶಿಗಳು ಸ್ಥಳಕ್ಕೆ ಬರಬೇಕು. ಲಿಖಿತ ಭರವಸೆ ನೀಡಬೇಕು. ಅಲ್ಲಿವರೆಗೂ ಶಾಂತಿಯುತವಾಗಿ ಧರಣಿ ನಡೆಸುತ್ತೇವೆ. ಆದರೆ ಜಿಲ್ಲಾಡಳಿತ ಧರಣಿಯನ್ನು ಹತ್ತಿಕ್ಕುವ ಕಲೆಸ ಮಾಡಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗಿಲ್ಲ. ಈ ಸಮಿತಿ ರಚನೆಯಾಗದೆ ಭೂಮಿ ಕೊಡಲು ಬರುವುದಿಲ್ಲ. 1990ರಿಂದ ಸಲ್ಲಿಸಿರುವ ಅರ್ಜಿಗಳು ಬಾಕಿ ಇವೆ. ಹೀಗಾಗಿ ವಿಳಂಬವಾಗುತ್ತಿದೆ. ಬ್ಯಾಲ್ಯದಲ್ಲಿ ಇರುವ ಗುಂಡುತೋಪಿನಲ್ಲಿ ನಿವೇಶನ ನೀಡಲು ತೊಂದರೆಯಿದೆ. ಕೆಲವರಿಗೆ ನಿವೇಶನಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2500 ಎಕರೆ ಸರ್ಕಾರಿ ಭೂಮಿಯನ್ನುಗುರುತಿಸಲಾಗಿದೆ. ಫಾರಂ ನಂಬರ್ 50 ಮತ್ತು 53ರ ಅಡಿ ಅರ್ಜಿ ಸಲ್ಲಿಸಿರುವ ಜನರಿಗೆ ಭೂಮಿ ನೀಡಲು ಸಿದ್ದತೆಯಾಗಿದೆ. ಆದರೆ ಬಗರ್ ಹುಕುಂ ಸಮಿತಿ ರಚನೆಯಾಗಿಲ್ಲ ಕುಂಟೆ, ಖರಾಬ್ ಭೂಮಿಯಲ್ಲಿ ನಿವೇಶನ ಮತ್ತು ಭೂಮಿ ಹಂಚಿಕೆ ಮಾಡಲು ಕೆಲವೊಂದು ಸಮಸ್ಯೆಗಳಿವೆ. ಮಧುಗಿರಿ ಶಾಸಕರ ಕೋರಿಕೆಯ ಮೇರೆಗೆ ಬ್ಯಾಲ್ಯದಲ್ಲಿ ಕಾಲೇಜು ನಿರ್ಮಾಣಕ್ಕೆ ಜಾಗ ನೀಡಲಾಗಿದೆ. ಇನ್ನು ಉಳಿದಂತೆ ಭೂಮಿ ನೀಡುವ ಸಂಬಂಧ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ ಎಂದು ವಿವರಿಸಿದರು.

ಆದರೆ ಧರಣಿನಿರತರು ಪಟ್ಟು ಸಡಿಲಿಸಿಲ್ಲ. ಧರಣಿ ಮುಂದುವರಿಸಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...