Homeಮುಖಪುಟಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ‘ಆಧುನಿಕ’ ಪರಿ : ಸಾಮಾಜಿಕ ಜಾಲತಾಣ ಬಳಕೆದಾರರ ಬೇಟೆಗೆ ತಯ್ಯಾರಿ

ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ‘ಆಧುನಿಕ’ ಪರಿ : ಸಾಮಾಜಿಕ ಜಾಲತಾಣ ಬಳಕೆದಾರರ ಬೇಟೆಗೆ ತಯ್ಯಾರಿ

ಒಂದಿಷ್ಟು ವೈಯಕ್ತಿಕ ವಿವರ ತುಂಬುವ ಮೂಲಕ ಫೇಸ್‌ಬುಕ್, ಟ್ವಿಟರ್ ಖಾತೆ ತೆರೆದು ನಿರಾಳವಾಗಿ ಸಂವಹನ ಮಾಡುತ್ತಿರುವ 40 ಕೋಟಿ ಭಾರತೀಯರು ಇನ್ನು ಮುಂದೆ ತಮ್ಮ ಖಾಸಗೀತನವನ್ನು ಕಳೆದುಕೊಳ್ಳಲಿದ್ದಾರೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ ಸುದ್ದಿ ಹರಡುವುದರಲ್ಲಿ ಮತ್ತು ಕೋಮುದ್ವೇಷ ಪಸರಿಸುವಲ್ಲಿ ಮುಂದಿರುವುದು ಬಿಜೆಪಿ ಪಕ್ಷ ಮತ್ತು ಅದರ ಬೆಂಬಲಿಗರೇ. ಈಗ ‘ಇಂಥದ್ದನ್ನೆಲ್ಲ ತಡೆಯಲು ಹೊಸ ನಿಯಮಾವಳಿ’ ಜಾರಿಗೆ ತರುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದರೆ ನಂಬುವುದು ಹೇಗೆ?

ಖಂಡಿತ ಇದು, ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಮಾಡಿಕೊಂಡಿರುವ ಒಂದು ವ್ಯಸ್ಥಿಯ ಸಂಚು.
ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರಲಿರುವ ಹೊಸ ಸೋಷಿಯಲ್ ಮೀಡಿಯಾ ನಿಯಮಾವಳಿಗಳ ಪರಿಣಾಮವಾಗಿ ಭಾರತದ 40 ಕೋಟಿ ಸೋಷಿಯಲ್ ಮೀಡಿಯಾ ಬಳಕೆದಾರರು ತಮ್ಮ ಅನಾಮಧೇಯತೆಯನ್ನು ಕಳೆದುಕೊಳ್ಳಲಿದ್ದಾರೆ. ಜೊತೆಗೆ ಅವರ ಖಾಸಗಿತನದ ಹಕ್ಕನ್ನು ಕಳೆದಿಕೊಳ್ಳಲಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಮೂಲಕವೇ ವಿರೋಧಿಗಳನ್ನು ಹತ್ತಿಕ್ಕುತ್ತ ಬಂದ ಮೋದಿ ಸರ್ಕಾರವೀಗ ಸಾಮಾಜಿಕ ಜಾಲತಾಣಗಳ ಬಳಸುವ ತನ್ನ ಸೈದ್ದಾಂತಿಕ ವಿರೋಧಿಗಳ ಮೇಲೆ ಈ ಹೊಸ ಅಸ್ತ್ರ ಪ್ರಯೋಗಿಸಲು ಸಿದ್ಧವಾಗಿದೆ.

ಭಾರತ ಸರ್ಕಾರ ಕೇಳಿದರೆ, ಫೇಸ್‌ಬುಕ್, ಟ್ವಿಟರ್, ಯು-ಟ್ಯೂಬ್, ವ್ಯಾಟ್ಸಾಪ್ ಮತ್ತು ಟಿಕ್ ಟಾಕ್ ಕಂಪನಿಗಳು ಅವರ ಯಾವುದಾದರೂ ಬಳಕೆದಾರರ ಐಡೆಂಟಿಟಿಯನ್ನು ಅಂದರೆ ವಿವರಗಳನ್ನು ಸರ್ಕಾರಕ್ಕೆ ಒದಗಿಸಬೇಕು. ಇದಕ್ಕೆ ಯಾವುದೇ ಪ್ರಕ್ರಿಯೆ ಇರುವುದಿಲ್ಲ, ಕಾನೂನಿನ ಮೊರೆ ಹೋಗುವಂತಿಲ್ಲ, ಕೇಳಿದಾಕ್ಷಣ ವಿವರ ನೀಡಬೇಕಷ್ಟೇ.

2018ರ ಡಿಸೆಂಬರ್‌ನಲ್ಲಿ ಸರ್ಕಾರ ಈ ನಿಯಮಾವಳಿ ರೂಪಿಸಿ, ಸಾರ್ವಜನಿಕ ಅಭಿಪ್ರಾಯ ಕೇಳಿತ್ತು. ಗೂಗಲ್, ಫೇಸ್‌ಬುಕ್‌ನಂತಹ ಕಂಪನಿಗಳನ್ನು ಒಳಗೊಂಡ ‘ದಿ ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಷಿಯೇಷನ್ ಆಫ್ ಇಂಡಿಯಾ’ ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ‘ಸುಪ್ರಿಂಕೋರ್ಟ್ ತಿಳಿಸಿದಂತೆ, ಇದು ಖಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಹೇಳಿದ್ದವು. ಆದರೂ ಸರ್ಕಾರ ಪಟ್ಟು ಬಿಡದೇ ಈ ನಿಯಮಾವಳಿ ಜಾರಿಗೆ ತರಲು ಹೊರಟಿದೆ.

ಹೀಗಾಗಿ ಸೋಷಿಯಲ್ ಮೀಡಿಯಾ ಕಂಪನಿಗಳು ತಮ್ಮ ಬಳಕೆದಾರರಿಗೆ ತಮ್ಮ ಐಡೆಂಟಿಟಿ ವಿವರ ನೀಡುವಂತೆ ನಿಯಮ ಮಾಡಲಿವೆ. ಇಷ್ಟು ವರ್ಷ ಕೇವಲ ಆನ್‌ಲೈನ್‌ನಲ್ಲಿ ಯಾವುದೇ ದಾಖಲೆ ಇಲ್ಲದೇ, ಒಂದಿಷ್ಟು ವೈಯಕ್ತಿಕ ವಿವರ ತುಂಬುವ ಮೂಲಕ ಫೇಸ್‌ಬುಕ್, ಟ್ವಿಟರ್ ಖಾತೆ ತೆರೆದು ನಿರಾಳವಾಗಿ ಸಂವಹನ ಮಾಡುತ್ತಿರುವ 40 ಕೋಟಿ ಭಾರತೀಯರು ಇನ್ನು ಮುಂದೆ ತಮ್ಮ ಖಾಸಗೀತನವನ್ನು ಕಳೆದುಕೊಳ್ಳಲಿದ್ದಾರೆ.
ಸುಳ್‌ಸುದ್ದಿ ತಡೆಯಲು ಮತ್ತು ಸಮಾಜವಿರೋಧಿ ಶಕ್ತಿಗನ್ನು ಪತ್ತೆ ಹಚ್ಚಲು ಈ ನಿಯಮಾವಳಿ ತರುತ್ತೇವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ವಿಶ್ವದ ಹಲವಾರು ದೇಶಗಳಲ್ಲಿ ಸೈಬರ್ ಅನ್‌, ಪೋರ್ನ್‌ ಜಾಲತಾಣ (ಅಶ್ಲೀಲ ತಾಣ) ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು, ಅಂತರ್ಜಾಲ ಒದಗಿಸುವ ಸಾಮಾಜಿಕ ಜಾಲತಾಣಗಳ ಸೇವೆಯ ಮೇಲೆ ನಿಯಂತ್ರಣ ಹೊಂದಿವೆ. ಆದರೆ ಅಲ್ಲಿ ಸಾಮಾಜಿಕ ಜಾಲತಾಣಗಳ ನೆರವು ಪಡೆದು, ಸೈಬರ್ ತಜ್ಞರ ಮೂಲಕ ಅಪರಾಧಿಗಳ ಪತ್ತೆ ಹಚ್ಚುತ್ತಾರೆ. ಅಶ್ಲೀಲ ಮತ್ತು ದ್ವೇಷ ಹರಡುವ ಜಾಲತಾಣ ಮತ್ತು ಅಕೌಂಟುಗಳನ್ನು ಪತ್ತೆ ಹಚ್ಚಲು ಫೇಸ್‌ಬುಕ್ ಮತ್ತು ಟ್ವಿಟರ್‌ಗಳು ವಿಶೇಷ ಸಾಫ್ಟ್ವೇರ್ ರೂಪಿಸಿವೆ. ಅಂತಹ ಅಕೌಂಟುಗಳನ್ನು ನಿಷೇಧಿಸುತ್ತವೆ.

ಆದರೆ ಭಾರತದಲ್ಲಿ ತರಲು ಹೊರಟಿರುವ ಕಾನೂನು ಮತ್ತು ನಿಯಮಗಳು ಉಳಿದ ದೇಶಗಳ ನಿಯಮಗಳಿಗಿಂತ ಅಪಾಯಕಾರಿಯಾಗಿವೆ. ಯಾವುದೇ ಕಾನೂನು ಪ್ರಕ್ರಿಯೆ ಅಥವಾ ನೋಟಿಸ್ ಇಲ್ಲದೇ ಜಾಲತಾಣಗಳಿಗೆ ಇಂತಿಂಥವರ ವಿವರ ಬೇಕೆಂದಾಕ್ಷಣ ನೀಡಲೇಬೇಕು. ಯಾವುದೇ ಆಡಳಿತ ಪಕ್ಷ ಇದನ್ನು ತಮ್ಮ ವಿರೋಧಿಗಳನ್ನು ಹಣಿಯಲು ಬಳಸಬಹುದು. ತಮ್ಮ ಸಿದ್ದಾಂತ ಒಪ್ಪದ ಸಾಮಾನ್ಯ ಜನರನ್ನೂ ಪತ್ತೆ ಹಚ್ಚಿ ತೊಂದರೆ ನೀಡಬಹುದು. ಹೇಳಿಕೇಳಿ, ತನ್ನ ವಿರೋಧಿಸುವವರನ್ನು ದೇಶದ್ರೋಹಿ, ಅರ್ಬನ್ ನಕ್ಸಲ್ ಎಂದೆಲ್ಲ ಜೈಲಿಗಟ್ಟುವ ಈ ಸರ್ಕಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರೋಧಿಸುವವರ ಬೇಟೆಯಾಡಲು ಹೊರಟಂತಿದೆ.
(ಮಾಹಿತಿ: ದಿ ಎಕನಾಮಿಕ್ ಟೈಮ್ಸ್, ಎನ್‌ಡಿಟಿವಿಡಾಟ್ ಕಾಂ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...