ಜಾರ್ಖಂಡ್ನಲ್ಲಿ ಬರ್ಬರ ಗುಂಪು ಥಳಿತದಿಂದ ತಬ್ರೇಝ್ ಅನ್ಸಾರಿ ಹತ್ಯೆಯಾದ ಬಳಿಕ ಪ್ರಜ್ಞಾವಂತರ ಆಕ್ರೋಶದ ಕಟ್ಟೆಯೊಡೆದಿದೆ. ಧಾರ್ಮಿಕ ಮತಾಂಧರ ಕ್ರೂರತನದಿಂದ ದೇಶಾದ್ಯಂತ ಹೆಚ್ಚುತ್ತಿರುವ ಗುಂಪು ಹತ್ಯೆಗಳನ್ನು ವಿರೋಧಿಸಿ ಜೂನ್ 26ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಮುಝಾಫರ್ ನಗರ್ ಕಾಲಿಂಗ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್ ಎಂಬ ಹೋರಾಟವನ್ನು ಜೂನ್ 26ರ ಸಂಜೆ 6 ಗಂಟೆಗೆ ಮುಝಾಫರ್ನಗರದ ಟೌನ್ ಪಾರ್ಕಾಝಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಾಟ್ನಾ ಕಾಲಿಂಗ್ ಫಾರ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್ ಹೋರಾಟ ಪಾಟ್ನಾದ ಕಾರ್ಗಿಲ್ ಚೌಕ್ನಲ್ಲಿ ನಡೆಯಲಿದೆ. ಹಿಂದೂಸ್ಥಾನವನ್ನು ಲಿಂಚಿಂಗ್ಸ್ಥಾನ ಮಾಡಬೇಡಿ ಎಂದು ಆಗ್ರಹಿಸಲಾಗಿದೆ.
ಲಕ್ನೋ ಕಾಲಿಂಗ್ ಫಾರ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ನಾಟ್ ಇನ್ ದ ನೇಮ್ ಆಫ್ ಲಿಂಚಿಂಗ್ ಹೋರಾಟ ಲಕ್ನೋದ ಘಂಟಾಘರ್ ನಲ್ಲಿ ಜೂನ್ 26ರ ಸಂಜೆ ನಡೆಯಲಿದೆ.
ಜಸ್ಟೀಸ್ ಫಾರ್ ತಬ್ರೇಝ್ ಹ್ಯಾಸ್ ಟ್ಯಾಗ್ನಲ್ಲಿ ನ್ಯಾಯಕ್ಕಾಗಿ ಸೇರೋಣ, ದ್ವೇಷದ ವಿರುದ್ಧ ಸೇರೋಣ ಎಂದು ದೆಹಲಿಯ ಜಂತರ್ ಮಂತರ್ನಲ್ಲಿ ಮೇಣದ ದೀಪ ಮೆರವಣಿಗೆ ನಡೆಯಲಿದೆ. ಈ ಹೋರಾಟವನ್ನು ಇಂಡಿಯಾ ಎಗೆನೆಸ್ಟ್ ಲಿಂಚ್ ಟೆರ್ರರ್ ಎಂದು ಕರೆಯಲಾಗಿದೆ.
ಗುಂಪು ಥಳಿತ, ಹತ್ಯೆಯನ್ನು ವಿರೋಧಿಸಿ ಹೈದರಾಬಾದ್ನ ಚಾರ್ಮಿನಾರ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಡಿಯೋಬಾಂಡ್ ಕಾಲಿಂಗ್ ಎ ಜಾಯಿಂಟ್ ಪ್ರೊಟೆಸ್ಟ್ ಹೆಸರಿನಲ್ಲಿ ಡಿಯೋಬಾಂಡ್ನ ಉರ್ದು ದರ್ವಾಝ ದಲ್ಲಿ ಸಂಜೆ 7;30ಕ್ಕೆ ಪ್ರತಿಭಟನೆ ನಡೆಯುತ್ತಿದೆ.
ಜಾತಿ ಧರ್ಮಗಳ ಹಂಗು ಮೀರಿ ಮಾನವರೆಲ್ಲರೂ ತಾವಿರುವೆಡೆಯಲ್ಲಿ ಪ್ರತಿಭಟನೆಯನ್ನು ನಡೆಸಿ ಗುಂಪು ಹತ್ಯೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಗಳನ್ನು ಒತ್ತಾಯಿಸಲು ಮನವಿ ಮಾಡಿದ್ದಾರೆ.