ಭಾರತದ ಆರ್ಥಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಮನಮೋಹನ್ ಸಿಂಗ್, ಚಿದಂಬರಂ ಕೊಡುಗೆ ದೊಡ್ಡದು ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಪಿ.ವಿ ನರಸಿಂಹರಾವ್, ಡಾ.ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಪಿ.ಚಿದಬರಂ ಇವರು ಭಾರತದ ಆರ್ಥಿಕತೆಯ ಶಿಲ್ಪಿಗಳಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ನಾವು 45 ವರ್ಷಗಳಿಂದ ನಿರ್ವಹಿಸಲಾಗದ್ದನ್ನು ಅವರು ಕೇವಲ ಒಂದು ವಾರದಲ್ಲಿ ಸಾಧಿಸಿದರು ಎಂದು ಹೊಗಳಿದ್ದಾರೆ.
ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿರವರ ಈ ಹೇಳಿಕೆ ಎಕಾನಾಮಿಕ್ಸ್ ಟೈಮ್ಸ್ ನಲ್ಲಿ ಪ್ರಕಟಗೊಳ್ಳುತ್ತಲೇ ಸಾಕಷ್ಟು ವೈರಲ್ ಆಗಿದೆ. ಬಹಳಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮುಖ್ಯವಾಗಿ ಈ ಹೇಳಿಕೆ ಆರ್ಥಿಕ ಕುಸಿತವುಂಟಾಗಿರುವ ಈ ಸಂದರ್ಭದಲ್ಲಿ ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ಧವಾಗಿದ್ದು ಹಿಂದಿನ ಯು.ಪಿ.ಎ ಸರ್ಕಾರದ ಪರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್ಥಿಕ ಕುಸಿತದ ವಿರುದ್ಧ ಬಹಳಷ್ಟು ಉದ್ಯಮಿಗಳು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿರುವ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿಯವರ ಹೇಳಿಕೆಗೆ ಸಾಕಷ್ಟು ಮಹತ್ವ ಲಭಿಸಿದೆ.
ಸಿದ್ದರಾಮಯ್ಯ ನೀನು ಬಹಳ ಅನುದಾನ ಸೋನಿಯಾ ಯಿಂದ ತಂದ