Homeಮುಖಪುಟರಾಜೀವ್ ಗಾಂಧಿ ಭಯ ಸೃಷ್ಟಿಸಲು ತಮಗೆ ದೊರಕಿದ್ದ ದೊಡ್ಡ ಬಹುಮತವನ್ನು ಬಳಸಿರಲಿಲ್ಲ: ಸೋನಿಯಾ ಗಾಂಧಿ

ರಾಜೀವ್ ಗಾಂಧಿ ಭಯ ಸೃಷ್ಟಿಸಲು ತಮಗೆ ದೊರಕಿದ್ದ ದೊಡ್ಡ ಬಹುಮತವನ್ನು ಬಳಸಿರಲಿಲ್ಲ: ಸೋನಿಯಾ ಗಾಂಧಿ

ಈಗಿನ ಪ್ರಧಾನಿ ನರೇಂದ್ರ ಮೋದಿಯವರು ತಮಗೆ ದೊರಕಿರುವ ಬಹುಮತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ಪರೋಕ್ಷವಾಗಿ ಆರೋಪಿಸಿದ್ದಾರೆ.

- Advertisement -
- Advertisement -

ರಾಜೀವ್ ಗಾಂಧಿ ಭಯವನ್ನು ಸೃಷ್ಟಿಸಲು ತಮಗೆ ದೊರಕಿದ್ದ ಬೃಹತ್ ಬಹುಮತದ ಆದೇಶವನ್ನು ಬಳಸಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ತಮಗೆ ದೊರಕಿರುವ ಬಹುಮತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜೀವ್ ಗಾಂಧಿಯವರ 75 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳು ಅಸಾಧಾರಣವಾದುದಾಗಿವೆ, ಆದರೂ ಅದು ವಿಭಜಕ ಶಕ್ತಿಗಳ ವಿರುದ್ಧದ ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1984 ರಲ್ಲಿ ಭಾರಿ ಬಹುಮತವನ್ನು ಪಡೆದಿದ್ದರು. ಆದರೆ ಭಯದ ವಾತಾವರಣವನ್ನು ಸೃಷ್ಟಿಸಲು, ಜನರನ್ನು ಬೆದರಿಸಲು ಮತ್ತು ಹೆದರಿಸಲು ಅಥವಾ ಸಂಸ್ಥೆಗಳನ್ನು ನಾಶಮಾಡಲು ಇದನ್ನು ಬಳಸಲಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿನ ಅವರ ಈ ಮಾತುಗಳು ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಹಣಕಾಸು ಮಂತ್ರಿ ಪಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದ ನಂತರ ಮಹತ್ವ ಪಡೆದುಕೊಂಡಿವೆ. ಸಿಬಿಐ ಮತ್ತು ಇಡಿಯಂತಹ ಕೇಂದ್ರ ತನಿಖಾ ಏಜೆನ್ಸಿಗಳನ್ನು “ವೈಯಕ್ತಿಕ ಸೇಡು ತೀರಿಸಿಕೊಳ್ಳುಲು ಸರ್ಕಾರ ಬಳಸುತ್ತಿದೆ” ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ನಂತರ “1989 ರಲ್ಲಿ, ಕಾಂಗ್ರೆಸ್ ಆದ ಬಹುಮತವನ್ನು ಪಡೆಯಲಿಲ್ಲ, ಆದ್ದರಿಂದ ರಾಜೀವ್ ಗಾಂಧಿ ಜನರ ಆದೇಶವನ್ನು ನಯವಾಗಿ ಸ್ವೀಕರಿಸಿದರು. ಪ್ರಸ್ತುತ ಪೀಳಿಗೆಗೆ ನಾನು ಹೇಳಲು ಬಯಸುತ್ತೇನೆ, ಆ ಸಮಯದಲ್ಲಿ ಕಾಂಗ್ರೆಸ್ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದರೂ, ಅವರು ಅಧಿಕಾರಕ್ಕೆ ಹಕ್ಕು ಸಾಧಿಸಲಿಲ್ಲ. ಇದಕ್ಕೆ ಕಾರಣ ಅವರ ಆಂತರಿಕ ನೈತಿಕ ಶಕ್ತಿ ಮತ್ತು ಪ್ರಾಮಾಣಿಕತೆ ಅವರಿಗೆ ಹಾಗೆ ಮಾಡಲು ಅವಕಾಶ ನೀಡಲಿಲ್ಲ” ಎಂದು ಸೋನಿಯಾ ಗಾಂಧಿ ಹೇಳಿದರು.

ತನ್ನ ಗಂಡನ 75 ನೇ ಜನ್ಮದಿನಾಚರಣೆಯು ಕೇವಲ ಕಾಂಗ್ರೆಸ್ ಪಕ್ಷದ ಒಂದು ಆಚರಣೆಯಲ್ಲ. ಆದರೆ ಅವನನ್ನು ನೆನಪಿಟ್ಟುಕೊಳ್ಳುವ, ಅವರ ನಿಲುವುಗಳನ್ನು ಅರ್ಥಮಾಡಿಕೊಳ್ಳುವ ಸಂದರ್ಭ, ಅವರು ಏನು ಸಾಧಿಸಿದರು ಮತ್ತು ಏನನ್ನು ಸಾಧಿಸಲು ಬಯಸಿದ್ದರು ಎಂಬುದರ ಕುರಿತು ಚರ್ಚಿಸಬೇಕಾದ ದಿನ ಇದು. ರಾಜೀವ್ ಗಾಂಧಿಯವರಿಗೆ ಪ್ರಿಯವಾದ ಮೌಲ್ಯಗಳ ಪರ ನಿಲ್ಲುವುದು ಅವರ 75 ನೇ ಜನ್ಮ ದಿನಾಚರಣೆಯಂದು ಅವರಿಗೆ ನಾವು ಸಲ್ಲಿಸುವ ಅತ್ಯುತ್ತಮ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ.

“ಅವರಿಗೆ ಪ್ರೇರಣೆ ನೀಡಿದ ಮೌಲ್ಯಗಳನ್ನು ಎತ್ತಿಹಿಡಿಯಲು, ಆ ಮೌಲ್ಯಗಳನ್ನು ನಾಶಮಾಡಲು ಮುಂದಾಗಿರುವ ಶಕ್ತಿಗಳನ್ನು ಎದುರಿಸಲು ನಮ್ಮ ಸಂಕಲ್ಪವನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪುನರುಚ್ಚರಿಸಲು ಇದು ಒಂದು ಸಂದರ್ಭವಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

“ಚುನಾವಣೆಯಲ್ಲಿ ಗೆಲುವು ಸೋಲು ಅನಿವಾರ್ಯ. ಇಂದು ನಮ್ಮ ಪಕ್ಷ ಎದುರಿಸುತ್ತಿರುವ ಸವಾಲುಗಳು ಅಸಾಧಾರಣವಾಗಿವೆ. ಆದರೆ ವಿಭಜಕ ಶಕ್ತಿಗಳ ವಿರುದ್ಧ ನಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಯಬೇಕಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಭಾರತದ ಕಲ್ಪನೆ ಮತ್ತು ನಮ್ಮ ಸಮಾಜದ ಸ್ವರೂಪವನ್ನು ಬದಲಿಸಲು ಹೊರಟಿರುವ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...