ಕೇಂದ್ರ ಸರ್ಕಾರವು 2019-20ರ ಬಜೆಟ್ನಲ್ಲಿ ಶಾಲಾ ಶಿಕ್ಷಣಕ್ಕಾಗಿನ ಅನುದಾನದಲ್ಲಿ”ಆರ್ಥಿಕ ಬಿಕ್ಕಟ್ಟಿನ” ಕಾರಣದಿಂದ 3,000 ಕೋಟಿ ರೂ.ಗಳಿಂದ ಕಡಿತಗೊಳಿಸವ ವರದಿಗಳು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರವು ತನ್ನ “ಶ್ರೀಮಂತ ಗೆಳೆಯರ” ಪರವಾಗಿದೆಯೇ ಹೊರತು ದೇಶದ ಭವಿಷ್ಯವಾದ ಮಕ್ಕಳ ಪರವಾಗಿಲ್ಲ ಎಂದು ದೂರಿದ್ದಾರೆ.
भाजपा सरकार अपने अमीर दोस्तों के 5.5 लाख करोड़ कर्ज माफ कर देती है। अमीर दोस्तों को 6-6 ऐयरपोर्ट दे देती है।
लेकिन स्कूल शिक्षा के बजट में 3000 करोड़ की कटौती हो रही है। मतलब बड़े-बड़े लोग रसगुल्ला खाएँ लेकिन मिड डे मील में सरकारी स्कूल के बच्चों..1/2https://t.co/9rjtOvUaD2
— Priyanka Gandhi Vadra (@priyankagandhi) December 9, 2019
“ಬಿಜೆಪಿ ಸರ್ಕಾರ ತನ್ನ ಶ್ರೀಮಂತ ಸ್ನೇಹಿತರ 5.5 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುತ್ತದೆ. ಆರು ವಿಮಾನ ನಿಲ್ದಾಣಗಳನ್ನು ತನ್ನ ಶ್ರೀಮಂತ ಗೆಳೆಯರಿಗೆ ನೀಡುತ್ತದೆ”. ಆದರೆ ಮಕ್ಕಳಿಗಾಗಿನ ಬಜೆಟ್ನಲ್ಲಿ 3000 ಕೋಟಿ ಕಡಿತ ಮಾಡುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ದೊಡ್ಡಜನರು ರಸಗುಲ್ಲಾಗಳನ್ನು ತಿನ್ನುತ್ತಾರೆ, ಆದರೆ ಮಧ್ಯಾಹ್ನದ ಊಟದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಪ್ಪು ಮತ್ತು ರೊಟ್ಟಿ ಮಾತ್ರ ಸಿಗುತ್ತದೆ” ಎಂದು ಪ್ರಿಯಾಂಕ ಕಿಡಿಕಾರಿದ್ದಾರೆ.
..मतलब बड़े-बड़े लोग रसगुल्ला खाएँ लेकिन मिड डे मील में सरकारी स्कूल के बच्चों को नमक रोटी नसीब होगा। 2/2
— Priyanka Gandhi Vadra (@priyankagandhi) December 9, 2019
ಶಿಕ್ಷಣ ಬಜೆಟ್ ಕಡಿತಗೊಳಿಸುವ ವರದಿಯ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು “ಶಿಕ್ಷಣಕ್ಕಿಂತ ಹೆಚ್ಚಾಗಿ ತನ್ನದೇ ಆದ ಪ್ರಚಾರದ ಮೇಲೆ ಹೆಚ್ಚು ಗಮನಹರಿಸುತ್ತದೆ” ಎಂಬುದು ಸ್ಪಷ್ಟವಾಗಿದೆ ಎಂದು ಅವರು ದೂರಿದ್ದಾರೆ.
ಶಾಲಾ ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ 56,536 ಕೋಟಿ ರೂಗಳಲ್ಲಿ 3000 ಕೋಟಿ ರೂಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಆಂಗ್ಲ ವೆಬ್ಸೈಟ್ ದಿಪ್ರಿಂಟ್ ವರದಿ ಮಾಡಿದೆ.
ಆರ್ಥಿಕ ಕುಸಿತದ ಕಾರಣಕ್ಕಾಗಿ ಈ ಕ್ರಮ ಅನಿವಾರ್ಯವಾಗಿದ್ದು, ಮುಂದಿನ ವಾರ ಈ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.