- Advertisement -
- Advertisement -
ಇಂದು ಪ್ರಕಟಗೊಂಡ ಉಪಚುನಾವಣೆಯ ಫಲಿತಾಂಶ ಬಿಜೆಪಿ ಪಾಳೆಯಕ್ಕೆ ಭರ್ಜರಿ ಸಂಭ್ರಮ ತಂದರೆ ಕಾಂಗ್ರೆಸ್ ಪಾಲಿಗೆ ಒಂದು ರೀತಿಯ ಮರಣಶಾಸನವಾದಂತಿದೆ. ಸೋಲಿನ ಹೊಣೆಹೊತ್ತು ಸಿಎಲ್ಪಿ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೇ ನೀಡಿದ ಬೆನ್ನಲ್ಲೆ KPCC ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಸಹ ರಾಜಿನಾಮೆ ಘೋಷಿಸಿದ್ದಾರೆ.
Dinesh Gundu Rao,Congress: I am taking responsibility and
resigning from the post of party's Karnataka State President. #KarnatakaBypolls pic.twitter.com/C8YEr870lI— ANI (@ANI) December 9, 2019
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಸೋಲಿನ ಹೊಣೆಹೊತ್ತು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾಲು ಸಾಲು ರಾಜಿನಾಮೆಗಳು ಕಾಂಗ್ರೆಸ್ ಪಕ್ಷದಲ್ಲಿ ಸಂಭವಿಸುತ್ತಿದ್ದು ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದು ನೋಡಬೇಕಿದೆ.