ಅಂತೂ ಇಂತೂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅರ್ಧ ಸಂಪುಟ ತುಂಬುವ ಕಾಲ ಬಂದಿದೆ. ಸಚಿವರ ಪಟ್ಟಿಯೂ ಸಿದ್ದಗೊಂಡಿದ್ದು ಇಂದು ಬೆಳಿಗ್ಗೆಯೇ ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸಲಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಯಡಿಯೂರಪ್ಪನವರು ನೀಡಿರುವ ಪಟ್ಟಿ ಈಗಿದೆ.
ಗೋವಿಂದ ಕಾರಜೋಳ : ಬಾಗಲಕೋಟೆ
ಡಾ. ಅಶ್ವಥ್ ನಾರಾಯಣ್ : ಬೆಂಗಳೂರು
ಲಕ್ಷ್ಮಣ್ ಸವದಿ : ಬೆಳಗಾವಿ
ಕೆ.ಎಸ್ ಈಶ್ವರಪ್ಪ – ಶಿವಮೊಗ್ಗ
ಆರ್.ಅಶೋಕ್ – ಬೆಂಗಳೂರು
ಜಗದೀಶ ಶೆಟ್ಟರ್ – ಧಾರವಾಡ
ಬಿ.ಶ್ರೀರಾಮುಲು – ಬಳ್ಳಾರಿ
ಬಿ.ಸುರೇಶ್ ಕುಮಾರ್ – ಬೆಂಗಳೂರು
ವಿ.ಸೋಮಣ್ಣ – ಬೆಂಗಳೂರು
ಸಿ.ಟಿ ರವಿ – ಚಿಕ್ಕಮಗಳೂರು
ಬಸವರಾಜ್ ಬೊಮ್ಮೊಯಿ – ಹಾವೇರಿ
ಕೋಟ ಶ್ರೀನಿವಾಸ ಪೂಜಾರಿ- ಉಡುಪಿ
ಜೆ.ಸಿ ಮಾಧುಸ್ವಾಮಿ – ತುಮಕೂರು
ಸಿ.ಸಿ ಪಾಟೀಲ್ – ಗದಗ
ಎಚ್.ನಾಗೇಶ್ : ಕೋಲಾರ
ಪ್ರಭು ಚೌವ್ಹಾಣ್ : ಬೀದರ್
ಜೊಲ್ಲೆ ಶಶಿಕಲಾಅಣ್ಣಾ ಸಾಹೇಬ್ : ಬೆಳಗಾವಿ
ಇನ್ನು 16 ಸಚಿವ ಸ್ಥಾನಗಳನ್ನು ತುಂಬದೇ ಉಳಿಸಿಕೊಂಡಿದ್ದು ಹಂತ ಹಂತವಾಗಿ ತುಂಬುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಕೆಲ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಕೇಳಿಬಂದಿದೆ.