- Advertisement -
- Advertisement -
ತಾವು ರೈತರ ನೆರವಿಗಾಗಿ ಆರಂಭಿಸಿದ ‘ಬೆಳೆಸಾಲಮನ್ನಾ ಸಹಾಯವಾಣಿ’ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾವು ಆರಂಭಿಸಿರುವ ‘ಬೆಳೆ ಸಾಲಮನ್ನಾ ಸಹಾಯವಾಣಿ’ಗೆ ಮೊದಲ 3 ದಿನಗಳಲ್ಲಿ ಕರೆ ಮಾಡಿದ ರೈತರ ಸಂಖ್ಯೆ-
04/11/2019 – 1251 ರೈತರು
05/11/2019 – 937 ರೈತರು
06/11/2019 – 742 ರೈತರು ಕರೆಮಾಡಿದ್ದು 3 ಸಾವಿರದಷ್ಟು ಜನರಿಗೆ ಉಪಯೋಗವಾಗಿದೆ ಎಂದಿದ್ದಾರೆ.
ಈ ಸಹಾಯವಾಣಿಯನ್ನು ಇನ್ನೂ ಹಲವು ವಾರಗಳು ಮುಂದುವರೆಸುತ್ತೇವೆ ಎಂದು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.
ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬಂದು ಕಾಯುತ್ತಿದ್ದರು. ಹಾಗಾಗಿ ರೈತರು 9164305868 ನಂಬರ್ ಗೆ ಕರೆ ಮಾಡಿ ತಮ್ಮ ಬೆಳೆ ಸಾಲಮನ್ನಾದ ವಿವರ ಪಡೆಯಬಹುದು ಎಂದು ಮೂರು ದಿನದ ಹಿಂದೆ ಎಚ್ಡಿಕೆ ಪ್ರಕಟಿಸಿದ್ದರು.