Homeಮುಖಪುಟಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

ಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

- Advertisement -
- Advertisement -

| ನಹುಷ |
ಉಡುಪಿ-ಚಿಕ್ಕಮಗಳೂರು ಲೋಕಾ ರಣರಂಗದಲ್ಲಿ ಬಿಜೆಪಿಯ ಕೂಗುಮಾರಿ ಬ್ರಾಂಡಿನ ಶೋಭಾ ಕರಂದ್ಲಾಜೆ ಮತ್ತ ಜೆಡಿಎಸ್ ವೇಷದ ಕಾಂಗ್ರೆಸಿಗ ಪ್ರಮೋದ್ ಮಧ್ವರಾಜ್ ನಡುವೆ ಮುಖಾಮುಖಿ ಹಣಾಹಣಿ ನಡೆದಿದೆ. ಜನದ್ರೋಹದಿಂದ ಹೆಸರು ಕೆಡಿಸಿಕೊಂಡಿರುವ ಶೋಭಕ್ಕ ಹೋದಹೋದಲ್ಲಿ ಕಾರಿಂದ ಇಳಿಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಕೆಗೆ ದಿನಗಳೆದಂತೆ ಸಂಕಟ ಹೆಚ್ಚಾಗುತ್ತಲೇ ಇದೆ. ಪ್ರಮೋದ್ ತನ್ನ ರಾಯಲ್ ದೌಲತ್ತಿನ ಹಮ್ಮು ಅಹಂಕಾರ ಬಿಟ್ಟು ಸಂಪ್ರದಾಯಿಕ ಶತ್ರುಗಳಿಗೆಲ್ಲಾ ಶರಣಾಗುತ್ತ ಅಖಾಡದಲ್ಲಿ ಗಟ್ಟಿಗೊಳ್ಳುತ್ತಿದ್ದಾರೆ. ಶೋಭಕ್ಕನ ಮೇಲಿರುವ ತಾತ್ಸಾರವನ್ನು ಹಿಂದೂತ್ವದ ಅಮಲಿಂದ ತಪ್ಪಿಸಿ ತಂದು ಓಟು ಮಾಡಿಕೊಳ್ಳಬೇಕಾದ ಸವಾಲು ಮೈತ್ರಿಕೂಟಕ್ಕೆ ಎದುರಾಗಿದೆ.

ಶೋಭಕ್ಕನ ದುಃಸ್ಥಿತಿ ಕಂಡು ಆರೆಸೆಸ್ ಬೆಚ್ಚಿಬಿದ್ದಿದೆ. ಈಯಮ್ಮನ ಫೀಲ್ಡಿಗೆ ಕಳಿಸಬೇಡಿ ಎಂದು ಬಿಜೆಪಿ ಲೀಡರ್‍ಗಳಿಗೆ ಆರೆಸೆಸ್ ಸೂತ್ರದಾರಿಗಳು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ನಾವೇ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ, ಆದರೆ ಆಕೆ ತೆರೆಮರೆಯಲ್ಲೇ ಇರಬೇಕು, ಆಕೆ ಕಂಡರೆ ಮತದಾರರಿಗೆ ಆಕ್ರೋಶ ಉಕ್ಕುತ್ತದೆಂದು ಚೆಡ್ಡಿ ಚತುರರು ಅಲವತ್ತು ಕೇಳುತ್ತಿದ್ದಾರೆ. ಹುಸಿ ಹಿಂದೂತ್ವದ ದೆಸೆಯಿಂದ ಕರಾವಳಿಯಲ್ಲಿ ಒಂಚೂರು ಶೋಭಕ್ಕನಿಗೆ ಬೆಂಬಲ ಇದೆಯಾದರೂ ಮಲೆನಾಡಿನ ಭಾಗದಲ್ಲಿ ಆಕೆಗೆ ಮಾನ-ಮರ್ಯಾದೆಯೇ ಇಲ್ಲ ಬಿಜೆಪಿಉ ಸೆಕೆಂಡ್ ಕಿಂಗ್ ಅಮಿತ್ ಶಾ ತೆಂಗಿಗೆ ರೇಟು ಏರಿಸಿದಂತೆ ಅಡಿಕೆಗೂ ಬಂಪರ್ ಬೆಲೆಬರುವಂತೆ ಮಾಡುತ್ತೇನೆಂದು ಮೋಸ ಮಾಡಿದ್ದು ಚಿಕ್ಕಮಗಳೂರು ಕಡೆಯ ತೋಟಗಾರರನ್ನು ಕೆರಳಿಸಿದೆ. ಅಡಿಕೆ-ಕರಿಮೆಣಸು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಬಿಜೆಪಿ ಅಂದರೆ ಬುಸುಗುಡುತ್ತಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿಟಿ.ರವಿ “ಈಕೆ ಮತ್ತೆ ಗೆದ್ದರೆ ನಮಗೆ ಉಳಿಗಾಲವಿಲ್ಲವೆಂದು ಹೇಳುತ್ತಿರುವುದು, ಅತ್ತ ಉಡುಪಿ ಭಾಗದ ರಘುಪತಿ ಭಟ್ಟ, ಸುನೀಲ್ ಕುಮಾರ್ ಶೋಭಕ್ಕ ಸೋತುಹೋಗಲೆಂದು ಒಳಗೊಳಗೇ ಹರಕೆ ಹೊರುತ್ತಿದ್ದಾರೆ. ಓಟು ಕೇಳುವ ನೈತಿಕ ಧೈರ್ಯ ಶೋಭಕ್ಕನಿಗೆ ಇಲ್ಲ, ಆಕೆ ಮೋದಿಗಾಗಿ ಮತ ಹಾಕಿ ಎನ್ನುತ್ತಿದ್ದಾರೆ. ಆರೆಸೆಸ್ ತಂಡ ಹಿಂದೂತ್ವ ಉದ್ದೀತನಕ್ಕೆ ಬಿಜೆಪಿಗೆ ಓಟು ಅನಿವಾರ್ಯವೆಂದು ಪ್ರಚಾರ ನಡೆಸಿದೆ. ಯಡ್ಡಿಯನ್ನು ಕುಣಿಸಲು ಶೋಭಕ್ಕನ ಗೆಲ್ಲಿಸಿಕೊಳ್ಳಬೇಕಾದ ದರ್ದು ಚೆಡ್ಡಿ ಚೆತುರರ ಕಾಡುತ್ತಿದೆ. ಕೇಸರಿ ಪಡೆ ಏನೇ ಹೇಳಿದರೂ ಕಟ್ಟರ್ ಭಜರಂಗಿಳು “ನೋಟಾ” ಒತ್ತುವ ಸಾಧ್ಯತೆಯೇ ಜಾಸ್ತಿ ನೋಟಾ ಹೆಚ್ಚಾದಂತೆ ಮೈತ್ರಿ ಅಭ್ಯರ್ಥಿಯ ಸೋಲಿನ ಸಾಧ್ಯತೆ ಕಮ್ಮಿಯಾಗುತ್ತದೆ.

ಮಜಾ ಎಂದರೆ, ಕಾಂಗ್ರೆಸ್‍ನಲ್ಲಿ ಒಳ ಹೊಡೆತಗಳ ಆಟವಿಲ್ಲ ಕಾಪುನಲ್ಲಿ ಮಾಜಿ ಸಚಿವ ಸೊರಕೆ, ಉಡುಪುಯಲ್ಲಿ ಮಾಜಿ ಎಮ್ಮೆಲ್ಲೆ ಸಭಾಪತಿ, ಕಾರ್ಕಳದಲ್ಲಿ ಮೊಯ್ಲಿ ಮುನಿಯಾಲ್ ಬಣ, ಮಲೆನಾಡಲ್ಲಿ ಜೆಡಿಎಸ್-ಕಾಂಗ್ರೆಸ್ ತಂಡ ಮೊದಲಿನ ಹೊಟ್ಟೆಕಿಚ್ಚು ಬಿಟ್ಟು ದುಡಿಯುತ್ತಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದ ವೇಗವೀರರು ಸ್ವಜಾತಿ ಪ್ರಮೋದ್ ಪರ ಏಕಗಂಟಲ್ಲಿ ಓಟು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಘಟ್ಟದ ಮೇಲಿನ ಒಕ್ಕಲಿಗರ ಮತಕ್ಕಾಗಿ ದೇವೇಗೌಡ-ಕುಮಾರಣ್ಣ ಸ್ಟ್ರೇಟಜಿ ಹೆಣೆಯುತ್ತಿದ್ದಾರೆ. ಶೋಭಕ್ಕನ ಪರವಾಗಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟ ಒಬ್ಬರ ಬಿಟ್ಟರೆ ಉಳಿದ ಎಮ್ಮೆಲ್ಲೆಗಳು ಮೊದಲಿನ ನಿಷ್ಠೆ-ನಿಯತ್ತು ತೋರಿಸುತ್ತಿಲ್ಲ. ಹೀಗಾಗಿ ಶೋಭಕ್ಕನಿಗೆ ಬಿಜೆಪಿ ಓಟ್ ಬ್ಯಾಂಕಿನ ಶೇ.25-30 ಮತ ಖೋತಾ ಆಗುವ ಲೆಕ್ಕಾಚಾರ ನಡೆದಿದೆ. ಮೈತ್ರಿ ಕೂಟ ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಪಡೆದ ಅಷ್ಟೂ ಮತ ಪಡೆದರೂ ಸಾಕು, ಗೆಲುವಿನ ಛಾನ್ಸ್‍ನ ಗ್ರಾಫ್ಟ್ ಏರಿಕೆಯಾಗುತ್ತದೆ.

ಶೋಭಕ್ಕನಿಗೆ ಮೋದಿ ಮಂಕು ಬೂದಿ ಬಿಟ್ಟರೆ ಮತ್ತ್ಯಾವ ಪ್ಲಸ್ ಪಾಯಿಂಟ್ ಇಲ್ಲ. ಸುಳ್ಯ ಕಡೆಯ ಆಕೆಗಿಲ್ಲ, ಸ್ವಜಾತಿ ಮತ ಬಾಂಧವರೂ ಇಲ್ಲ! ಕರಾವಳಿಯ ಬಿಲ್ಲವರು ಮತ್ತು ಬಂಟರಿಗೆ ಸಂಘಪರಿವಾರದ ಹಿಂದೂತ್ವದ ಅಸಲೀ ಆಟದ ಹಿಕಮತ್ತು ಶೂದ್ರರಿಗೆಷ್ಟು ಗಂಡಾಂತರಕಾರಿ ಎಂಬುದು ಅರ್ಥವಾಗಿದೆ. ಬಿಲ್ಲವರು ಪಾಪದ ಹುಡುಗರು ಹಿಂದೂತ್ವದ ಹೆಸರಲ್ಲಿ ಜೈಲು ಪಾಲಾಗಿರುವ ಕರುಣಾ ಕತೆ ಆ ಜಾತಿಯ ಹಿರಿಯರ ಕಣ್ಣು ತೆರೆಸಿದರೆ ಮೈತ್ರಿಕೂಟದ ಗೆಲುವು ಇನ್ನಷ್ಟು ನಿಚ್ಚಳವಾಗುತ್ತದೆ. ಫೋಟೋ ಫಿನಿಶ್ ಫಲಿತಾಂಶ ಉಡುಪಿ-ಚಿಕ್ಕಮಗಳೂರು ಈ ಬಾರಿ ಕೊಡುವುದಂತೂ ಖರೆ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...