Homeಕವನನಮ್ಮ ಇಂದಿಗೆ ಹೊಂದಿಸಿದ ಬ್ರೆಖ್ಟ್ : ಬರ್ಟೋಲ್ಟ್ ಬ್ರೆಖ್ಟ್‌ನ ನಾಲ್ಕು ಪದ್ಯಗಳ ಭಾವರೂಪಾಂತರ -ರಘುನಂದನ

ನಮ್ಮ ಇಂದಿಗೆ ಹೊಂದಿಸಿದ ಬ್ರೆಖ್ಟ್ : ಬರ್ಟೋಲ್ಟ್ ಬ್ರೆಖ್ಟ್‌ನ ನಾಲ್ಕು ಪದ್ಯಗಳ ಭಾವರೂಪಾಂತರ -ರಘುನಂದನ

- Advertisement -
- Advertisement -

ಅದು

ಬರೀ ಐಡಿಯಾ ಆಗಿದ್ದು ಮಬ್ಬುಮ

ಬ್ಬಾಗಿದ್ದಾಗ ಅಬ್ಬಬ್ಬ ಅನ್ನೋರೆ

ಎಲ್ಲಾರೂ. ಮಕಮೂತಿ ಮೂಡಿ, ಜಾರಿ

ಶುರು ಆಯಿತೊ, ಲಬ ಲಬೋ ಲಬೋ

 

ಅದೇ ಸಲೀಸ್, ಅಲ್ವಾ?

ಆವತ್ತು ಜನರೆಲ್ಲಾ ಬೀದಿಗಿಳಿದ್ಮೇಲೆ, ಗವರ್ಮೆಂಟವರು ಪಾಂ

ಪ್ಲೆಟ್ ಹಂಚಿದರು, ಎಲ್ಲಾ ಕಡೇನೂ: ಜನಾ ಗವರ್ಮೆಂಟವರ

ನಂಬಿಕೆ ಕಳಕೊಂಡಿದಾರೆ, ಈಗದನ್ನ ತಿರ್ಗಾ, ಕಷ್ಟಾಪಟ್ಟು, ಸಂ

ಪಾದಿಸ್ಕೋಬೇಕವರು ಅಂತ. ಹಂಗಾರೆ, ಈ ಗವರ್ಮೆಂಟವರು,

ಒಟ್ಟು ಜನರನ್ನೇಯ ಬರ್ಖಾಸ್ತ್ ಮಾಡಿ, ಬೇರೆ, ಇನ್ನೊಂದೇ,

ಜನರನ್ನಾರಿಸ್ಕೊಳ್ಳೋದು… ಅದೇ ಇನ್ನೂ ಸಲೀಸ್‍, ಅಲ್ವಾ?

 

ನಾನು, ಉಳಕೊಂಡೋನು

ಹೌದು, ಗೊತ್ತದೆ: ನನ್ನದೃಸ್ಟ, ಅಸ್ಟೆ. ಎಸ್ಟೊಂದ್

ಜನ ಗೆಣ್ಕಾರ್ರ ಪೈಕಿ ಉಳ್ಕೊಂಡೋನ್ ನಾನೊಬ್ನೆ

 

ನಿನ್ನೆ ರಾತ್ರಿ ಕನ್ಸಲ್ಲಿ ಅಂತೇವೊಬ್ಬ ಗೆಣ್ಕಾರ ಬಂದ, ‘ತಾಳ್ಕೊಂಡ್ಹೊಂ

ದ್ಕೊಂಡ್ಗಟ್‍ಮುಟ್ಟಿದ್ ತೂರ್ಕೊಂಡೋನು ಉಳಕೊಂಡ’ ಅಂದ…

 

ಹೇಸ್ಗೆ ಆಯ್ತದೆ ನನ್ ಕಂಡ್ರೆ ನಂಗೇ

 

ನನಿಗೆ ಹಿಂಗ್ಯಾಕ್ಮಾಡ್ತ್ಯಾ ನೀನುs?

ಮನೆವಳ್ಗಡೆ ಸಿಡುಬಮ್ಮನಿಂದ ಸಾವು.

ವರ್ಗಡೆ ಕಾಳ್ಗಿಚ್ಚಿನಿಂದ ಸಾವು. ಹಿಂ

ಗಾರೆ ನಾವು ಎಲ್ಗೋಗನಾ, ಏನ್ಮಾ

ಡನಾ, ಹೇಳಿ?… ನನ್ನ ಮಕದ್ಮೇಲೆ

ಹೇತುಬಿಟ್ಟವ್ಳೆ ಅವ್ಳು. ಅವ್ಳು ಅಂದ್ರೆ

ನನ್ನವ್ವ. ಅವ್ವಾ, ನನಿಗೆ ನನಿಗ್ಹಿಂಗ್ಯಾ

ಕ್ಮಾಡ್ತ್ಯವ್ವಾ ನೀನುs… ಜನನೀ?

 

ಪದ್ಯಗಳ ಹೆಸರು ಇಂಗ್ಲಿಶಿನಲ್ಲಿ ಕ್ರಮವಾಗಿ:

When It’s A Notion; The Solution; I, The Survivor; Germany 1945.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...