Homeಮುಖಪುಟ ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

 ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

ಠಕ್ಕರ್: ಭೋಪಾಲದಲ್ಲಿ ವಿಷಾನಿಲದೊಂದಿಗೆ ಮುಖಾಮುಖಿ

- Advertisement -
- Advertisement -

| ಮಲ್ಲಿ |

‘ಉಜ್ಜೋಣ ಉಜ್ಜೋಣ ಅಂಬಾ ಬೆನ್ನು ಉಜ್ಜೋಣ’

ಪ್ರಗ್ಯಾ ಮನೆ ಸಮೀಪ ಹೋದಂತೆ ಒಂಥರಾ ವಿಷಾನಿಲದ ವಾಸನೆ…. ತೀರಾ ಸಮೀಪವೇ ಹೋದಾಗ ಸೆಗಣಿ ವಾಸನೆ.. ಹಾಂ, ಇದು ಪ್ರಗ್ಯಾ ಮನೆಯೇ ಎಂದು ಪಕ್ಕಾ ಆಗುತ್ತಿದ್ದಂತೆ, ಅಂಗಳದಲ್ಲಿ ಅಂಬಾ ಬೆನ್ನು ಉಜ್ಜುತ್ತ ನಿಂತಿದ್ದ ಪ್ರಗ್ಯಾ ಕಂಡೇಬಿಟ್ಟರು.

ಅಕ್ಕೋ, ಕರ್ನಾಟಕದಿಂದ ಬಂದೀನಿ… ಲೂಜಾವರ ಸ್ವಾಮೀಜಿ ತಮ್ಮ ಇಂಟರ್‍ವ್ಯೂ ಮಾಡಾಕೆ ಕಳಿಸಿದ್ದಾರೆ.
‘ಓಹ್, ಮೊನ್ನೆನೇ ಅವರ ವ್ಯಾಟ್ಸಪ್ ಬಂದಿತ್ತು, ನಿನ್ನೆ ಇಮೇಲ್ ಕೂಡ ಕಳಿಸಿದ್ದರು… ಬಾರಪ್ಪ ಬಾ’ ಎಂದು ಗೋವಿನ ಹಿಂಭಾಗದ ತುದಿಯಿಂದ ಮುಂದಕ್ಕೆ ಉಜ್ಜತೊಡಗಿದರು.
‘ಅಲ್ಲ ಅಕ್ಕವ್ವ, ನೀವೇನೋ ವ್ಯಾಟ್ಸಪ್, ‘ಮೇಲ್’ ಬಳಸಬಹುದು. ಆದರೆ, ಲೂಜಾವರರು ಬಳಸ್ತಾರಾ?’
‘ಅವ್ರು, ನಾನು ಎಲ್ಲ 1988ರಿಂದಾನೇ ಬಳಸ್ತಾ ಇದೀವಿ…’
‘ಮೋದಿ ಹಂಗೆ ಹೇಳಿದ್ದಕ್ಕೆ ಜನ ನಗ್ತಾ ಅವ್ರೆ ಅಕ್ಕಾ’
‘ದಡ್ಡರು ನೀವೆಲ್ಲ…. ನಮ್ಮ ‘ಮೇಲು’ ಅಂದ್ರೆ ಅದು ಮೇಘ ಸಂದೇಶ… ಮೋಡದ ಮೂಲಕವೇ ಸಂದೇಶ ರವಾನಿಸಿಕೊಳ್ತೀವಿ…ಅದನ್ನು ಬೇರೆಯವರು ನೋಡಾಕಾಗಲ್ಲ…ಮೋಡಗಳ ರಕ್ಷಣೆಯಲ್ಲಿ ಅದು ಹರಿದು ನಮ್ಮವರನ್ನ ತಲುಪುತ್ತೆ’
‘ಅದಿರ್ಲಿ ಅಕ್ಕಾ, ‘ಮೇಲು’ ಬಂದು ಇನ್‍ಬಾಕ್ಸ್‍ಗೆ ಬೀಳ್ತಾವೆ. ಆದ್ರೆ ನಿಮ್ಮ ಮೇಘ ಸಂದೇಶ ಎಲ್ಲಿ ಬೀಳತ್ತೆ? ನಿಮ್ಗೆ, ಲೂಜಾವರರಿಗೆ ಬಕ್ಕಣ (ಕಿಸೆ, ಪಾಕೆಟ್) ಬೇರೆ ಇಲ್ವಲ್ಲ?’
‘ಮೂರ್ಖ. ಆ ಸಂದೇಶಗಳು ಸೀದಾ ಆತ್ಮವನ್ನ ತಲುಪ್ತಾವೆ’
‘ಹಂಗಾದ್ರೆ ನಿಂಗೆ ಶಿಕ್ಷೆ ಆಗಲ್ಲಕ್ಕ… ತನಿಖೆ ಮಾಡೋರಿಗೆ ನಿಮ್ಮ ಮೇಘ ಸಂದೇಶ ಸಿಗೋದೇ ಇಲ್ವಲ್ಲ?’
‘ಇದು ಆಫ್ ದಿ ರೆಕಾರ್ಡ್ ಇರಲಿ..’

‘ಅಕ್ಕಾ ಹಿಂಗ ಉಜುತ್ತೀರಲ್ಲ ಆಕಳ ಬೆನ್ನನ್ನ… ಬಿಪಿ ಕಂಟ್ರೋಲ್‍ಗೆ ಬರೋದು ಆಕಳದ್ದೋ, ನಿಮ್ದೋ ಅಕ್ಕಾ’
‘ಪೆದ್ದ, ಗೋಮಾತೆಗೆ ಬಿಪಿ, ಶುಗರ್ ಬರಲ್ಲ’
‘ನಾ ಬಂದಾಗಿಂದ ನೋಡತಿನಿ, ಉಜ್ತಾನೇ ಇದ್ದೀರಿ… ಸೋಲೋ ಭಯದಲ್ಲಿ ಬಿಪಿ ಏರುಪೇರಾಗಿದೆಯಾ?
‘ಓವರ್ ಆಯ್ತು… ಶಾಪ ಕೊಡ್ಲಾ?’
‘ಬೇಡಕ್ಕೋ, ಸಾರಿ….ಅಕ್ಕಾ ಅಕ್ಕಾ, ಕ್ಯಾನ್ಸರ್ ಔಷಧಿ ಬೀಳ್ತಾ ಇದೆ…. ಒಂದು ಬಾಟಲ್ ಕೊಡಕ್ಕ’
(ಆಕಳು ಒಂದು ಕೊಡದಷ್ಟು ಸೂಸು ಮಾಡಿತು…)
‘ಹೇಯ್, ನಿಂಗೆ ಬೇಕಾದ್ರೆ ಅಲ್ಲಿ ಕರ್ನಾಟಕದಲ್ಲಿ ಸಿಗುತ್ತೆ… ರಾಮ್ದೇವ್ ನನ್ನ ಫಾರ್ಮುಲಾ ಇಟ್ಗೊಂಡು, ಗೋಮೂತ್ರಗಳ ಪಾಕೆಟ್ ಮಾಡಿ ‘ಹೇತಂಜಲಿ’ಯಲ್ಲಿ ಮಾರ್ತಾನೆ…’

‘ಅಕ್ಕಾ ಈ ರೇಡಾರ್ ಬಗ್ಗೆ ನಿಂಗೇನಾದ್ರೂ ಗೊತ್ತಾ ಅಕ್ಕ?’
‘ಚಿಕ್ಕಪ್ಪಯ್ಯ ಹೇಳಿದ್ದನ್ನ ಜೋಕ್ ಮಾಡ್ತೀದಿಯಾ? ಆಫ್ ದಿ ರೆಕಾರ್ಡ್ ಕೇಳು: ನಮ್ಮನ್ನೆಲ್ಲ ಜೈಲಿಗೆ ಹಾಕಿದ್ರಾ… ಅಮಿತಣ್ಣಂಗೂ ಜೈಲು ಕಾದಿತ್ತಾ? ಚಿಕ್ಕಪ್ಪ ಮೋಡ ಸೃಷ್ಟಿಸಿಬಿಟ್ಟ… ಎನ್‍ಐಎ ಕಣ್ಣಿನ ಪೊರೆಗೆ ಈ ಮೋಡ ಅಮರಿಕೊಂಡವು… ಅಸೀಮಾನಂದ ಕಾಕಾ ಅದಕ್ಕೇ ರಿಲೀಸ್ ಆಗಲಿಲ್ವಾ… ನಮ್ಮ ಚಿಕ್ಕಪ್ಪ ಹೇಳಿದ್ದು ನಿಮ್ಗೆ ಅರ್ಥ ಆಗಲ್ಲ…’
(ಪ್ರಗ್ಯಕ್ಕ ಎದೆ ಮೇಲೆ ಕೈ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡರು….ಆಕಳು ಅಂಬಾ ಅಂದಿತು…)
‘ಏನಾಯ್ತಕ್ಕಾ, ಎದೆನೋವಾ?’
‘ನೋ ನೋ… ಆತ್ಮಕ್ಕೆ ಮೇಘ ಸಂದೇಶವೊಂದು ಬಂದಿದೆ, ಚಿಕ್ಕಪ್ಪಯ್ಯನ ಕಡೆಯಿಂದ’
‘ಆಯ್ತಕ್ಕ ಇನ್‍ಬಾಕ್ಸ್…. ಸಾರಿ… ಆತ್ಮವ ತೆರೆದು ಮೇಲು ನೋಡು… ಬರ್ಲಾ ಅಕ್ಕಾ…ಒಂದೇ ಒಂದು ಸಲ ಉಜ್ಜಲಾ?’
(ಟೊಣಪನೊಬ್ಬ ಬಂದು ಏ ಎಂದು ಗದರಿಸಿದ)
‘ಉಜ್ಜಲಿ ಬಿಡು…. ಗೋಮಾತೆ ಇರೋದೇ ಉಜ್ಜಲು, ಬಿಪಿ ಕಂಟ್ರೋಲ್ ಮಾಡಿಕೊಳ್ಳಲು…’
ನಮ್ಮ ಠಕ್ಕಣ್ಣ ಆಕಳಿನ ಬೆನ್ನು ಉಜ್ಜುವಾಗ ಮತ್ತೆ ವಿಷಾನಿಲದ ವಾಸನೆ… ಭಯ ಬಿದ್ದವನೇ ಅಲ್ಲಿಂದ ಪರಾರಿಯಾಗಿ ಬಂದಿದ್ದಾನೆ…

ದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ… ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...