ಸೋಮಶೇಖರ್ ಚಲ್ಯ |
ಬಾಲಿವುಡ್ ನಟ ಸಂಜಯ್ದತ್, ತನ್ನ ಬಗೆಗೆ ಬಯೋಫಿಕ್ ಸಿನಿಮಾ ಮಾಡುವಷ್ಟು ಫೇಮಸ್ ಆಗಿರುವ ಸ್ಟಾರ್. ಸಿನಿಮಾಗಳಲ್ಲಿ ಹೀರೋ ಆಗಿರುವ ಸಂಜಯ್ ತನ್ನ ವಿಲನ್ ರೂಪವನ್ನು ಆಗಾಗ ಪ್ರದರ್ಶಿಸಲಿಲ್ಲವೆಂದರೆ ಉಂಡ ಹಿಟ್ಟು ಕರಗಂಗಿಲ್ಲ ಅನ್ನಿಸುತ್ತೆ. ಅಂದಹಾಗೆ ಕೆಲ ದಿನಗಳ ಹಿಂದೆ ದೀಪಾವಳಿ ಸಡಗರದಲ್ಲಿದ್ದ ಸಂಜಯ್ದತ್ ಪತ್ರಕರ್ತರ ಮೇಲೆ ತಮ್ಮ ಪರಾಕ್ರಮ ತೋರಿದ್ದಾರೆ. ಟಿಆರ್ಪಿ ಗೀಳಿನ ಹಿಂದೆಬಿದ್ದಿರುವ ಮಾಧ್ಯಮದ ಮೇಲಾಧಿಕಾರಿಗಳು ತಮ್ಮ ಪತ್ರಕರ್ತರನ್ನು ಸ್ಟಾರ್ಗಳ ಹಿಂದೆ ಬಿಟ್ಟಿದ್ದರು. ಯಜಮಾನನ ಅಪ್ಪಣೆಯಂತೆ ಸಂಜಯ್ದತ್ ದೀಪಾವಳಿ ಆಚರಣೆಯ ಸಂದರ್ಭವನ್ನು ಸೆರೆಹಿಡಿದು ವರದಿ ಮಾಡಲು ಜಮಾಯಿಸಿದ್ದ ಪತ್ರಕರ್ತರನ್ನು ಅವಾಚ್ಯ ಪದಗಳಿಂದ ಉಗಿದು ಆಚೆಗಟ್ಟಿ ಪರಾಕ್ರಮ ಮೆರೆದಿದ್ದಾರೆ ಸ್ಟಾರ್ ಸಂಜಯ್. ಈ ಪುಣ್ಯಾತ್ಮನ ಜೀವನಾಧಾರಿತ ಚಿತ್ರ ಸಂಜು ಸಿನಿಮಾದಲ್ಲಿ ರಣ್ಭೀರ್ ಕಪೂರ್ ಅಭಿನಯಿಸಿದ್ದ ಸಂಜಯ್ ಪಾತ್ರವು ತಾನು ವೇಶ್ಯಯರನ್ನು ಹೊರತುಪಡಿಸಿ 308 ಹುಡುಗಿಯ ರೊಂದಿಗೆ ಮಂಚ ಹಂಚಿ ಕೊಂಡಿದ್ದಾಗಿ ಹೇಳಿಕೊಂಡು ಸಂಜಯ್ ದತ್ನ ಕಾಮುಕ ವ್ಯಕ್ತಿತ್ವವನ್ನು ಬಿಚ್ಚಿಟ್ಟಿತ್ತು. ಈಗ ತಾನೇ ಅವಾಚ್ಯ ಶಬ್ದಗಳ ಮಾತುಗಳಿಂದ ತನ್ನ ಗುಣಗಾನ ಮಾಡಿ ಕೊಂಡಿದ್ದಾರೆ.